ಕಾರ್ಕಳ : ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಮುದಾಯವನ್ನು ನಿಂದಿಸಿ ಪೋಸ್ಟ್ ಗಳನ್ನು ಮಾಡುತ್ತಿರುವ ಅನಿತಾ ಕಾಸರಗೋಡು ಎಂಬಾಕೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆಕಾರ್ಕಳ ಯೂತ್ ಬಿಲ್ಲವ ಸಂಘಟನೆ ಯು ಕಾರ್ಕಳ ನಗರ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದೆ.
ಆರೋಪಿತರು ನಿರಂತರವಾಗಿ ಫೇಸ್ ಬುಕ್ನಲ್ಲಿ ಬಿಲ್ಲವ ಸಮುದಾಯವನ್ನು ಅವಹೇಳನಗೊಳಿಸುವಂತಹ ಹಾಗೂ ಸಾರ್ವಜನಿಕ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಸಂದೇಶಗಳನ್ನು ಹರಿಯಬಿಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.
ಯೂತ್ ಬಿಲ್ಲವ ಅಧ್ಯಕ್ಷ ಸುಕೇಶ್ ಕರ್ಕೇರ, ಸ್ಥಾಪಕಾಧ್ಯಕ್ಷ ಭರತ್ ಸಿ.ಅಂಚನ್, ಸದಸ್ಯರಾದ ಪ್ರವೀಣ್ ಪಿ., ವಿಶಾಲ್ ಸಾಲಿಯಾನ್, ಸುನಿಲ್ ನೆಲ್ಲಿಗುಡ್ಡೆ, ಸಂದೇಶ್ ಕೋಟ್ಯಾನ್, ಅನಿಲ್ ಪೂಜಾರಿ, ಸುಧೀರ್ ಪೂಜಾರಿ, ಜಗದೀಶ್ ಪೂಜಾರಿ, ಅಕ್ಷಯ್ ಬಂಗೇರ, ಅಭಿಲಾಷ್ ಶ್ರೇಯಸ್ ರವೀಂದ್ರ ಪೂಜಾರಿ, ಪೂಜಾರಿ, ಶಿವಣ್ಣ, ಪೂಜಾರಿ, ಕಾರ್ತಿಕ್ ಸುವರ್ಣ, ಸುಜಿತ್ ನಿಟ್ಟೆ ಮತ್ತಿತರರು ಉಪಸ್ಥಿತರಿದ್ದರು.


