ಕಾರ್ಕಳ : ಸಂಕಷ್ಟಹರ ಚತುರ್ಥಿ ಹಾಗೂ ದೀಪೋತ್ಸವ ಪ್ರಯುಕ್ತ ನವೆಂಬರ್ 8ರ ಶನಿವಾರದಂದು ಶ್ರೀ ವಿಠೋಬ ರುಕ್ಕಾಯಿ ಭಜನಾ ಮಂಡಳಿ ಹಿರ್ಗಾನ ಭಜನಾ ಮಂದಿರದಲ್ಲಿ 17ನೇ ವರ್ಷದ ಭಜನೆ ಹಾಗೂ ಮಹಾಪೂಜೆ ನಡೆಯಿತು. ಆ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಗೋಕುಲ್ ದಾಸ್ ವಾಗ್ಲೆ, ಅಧ್ಯಕ್ಷರಾದ ಸುಮಂತ್ ಶೆಟ್ಟಿ, ಉಪಾಧ್ಯಕ್ಷ ಸೂರಜ್ ನಾಯಕ್, ಪ್ರಧಾನ ಅರ್ಚಕ ಆನಂದ ಕೋಟ್ಯಾನ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.


