ಪುತ್ತೂರು, ಜ. 07 : ಕುರಿಯ ಗ್ರಾಮದ ಬೂಡಿಯಾರಿನಲ್ಲಿ ವಿದ್ಯುತ್ ತಂತಿ ತುಂಡಾಗಿ 900ಕ್ಕೂ ಅಧಿಕ ಅಡಿಕೆ ಸಸಿಗಳು ಭಸ್ಮವಾದ ಘಟನೆ ಮಂಗಳವಾರ ಸಂಭವಿಸಿದೆ. ಬೂಡಿಯಾರು ನಿವಾಸಿ ಗಣೇಶ್ ರೈ ಅವರಿಗೆ ಸೇರಿದ ತೋಟ ಇದು. ಒಂದು ವರ್ಷದ ಹಿಂದೆ ನೆಟ್ಟ ಗಿಡ ಇದಾಗಿದ್ದು ಉತ್ತಮವಾಗಿ ಬೆಳೆದಿದ್ದವು.
ಮಂಗಳವಾರ ಮಧ್ಯಾಹ್ನ ಏಕಾಏಕಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದೆ. ಅನಂತರ ಬೆಂಕಿ ಹೊತ್ತಿಕೊಂಡು ಗಿಡಗಳು ಸುಟ್ಟು ಹೋಗಿವೆ. ಪೈಪ್ ಗಳೂ ಸಂಪೂರ್ಣ ಹಾನಿಗೀಡಾಗಿದ್ದು, ಸುಮಾರು 5 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

