ಕಾಯರ್ತಡ್ಕ, ಜೂ. 02 : ಇಂದು ಶ್ರೀ ಸತ್ಯಪ್ರಸಾದ್, ಕರಿಯನೆಲ-ಕಲ್ಮಂಜ ಮಾಲಕತ್ವದ “ಅಗ್ರಿ ಮಾರ್ಕೆಟ್” ನೂತನ ಸಂಸ್ಥೆಯು ಇಂದು ಶುಭಾರಂಭಗೊಂಡಿದೆ.
ಮುಂಡಾಜೆ ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವಿನಯ್ ಚಂದ್ರ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಅಶ್ವಿತ್ ಹೆಚ್.ಆರ್ ಎಸ್ ಡಿಎಂ ಶಿಕ್ಷಕರು, ಶ್ರೀ ರಾಜೇಶ್ ತೋಟತ್ತಾಡಿ, ಡೀಕಯ್ಯ ಗೌಡ ಬಂಡೇರಿ ಹಾಗೂ ಮಾಲಕ ಸತ್ಯಪ್ರಸಾದ್ ಅವರ ಮಾತೃಶ್ರೀ ಶ್ರೀಮತಿ ಸುಮತಿ ಬಟ್ಟಾಜೆಯವರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಶ್ರೀ ವಿನಯ್ ಚಂದ್ರ ಅವರು, ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸಂಸ್ಥೆಯು ಕಾರ್ಯಾಚರಿಸಲಿದೆ. ವಿಶ್ವ ಪರಿಸರ ದಿನದಂದೇ ಶುಭಾರಂಭಗೊಂಡು, ಪರಿಸರಕ್ಕೂ ಸೇವೆಯನ್ನು “ಅಗ್ರಿ ಮಾರ್ಕೆಟ್” ನೀಡಲಿ. ಕೃಷಿಕರಿಗೆ ಬೇಕಾದಂತಹ ಎಲ್ಲಾ ರೀತಿಯ ಸಾಮಾಗ್ರಿಗಳು ಈ ಸಂಸ್ಥೆಯಲ್ಲಿ ಲಭ್ಯವಿದ್ದು, ಕೃಷಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ, ಸತ್ಯಪ್ರಸಾದ್ ಅವರು ಮತ್ತಷ್ಟು ಶಾಖೆಗಳನ್ನು ತೆರೆಯುವಂತಾಗಲಿ ಎಂದು ಶುಭಹಾರೈಸಿದರು.
ನೂತನ “ಅಗ್ರಿ ಮಾರ್ಕೆಟ್” ಸಂಸ್ಥೆಯಲ್ಲಿ ಸಾವಯವ ಮತ್ತು ರಾಸಾಯನಿಕ ರಸಗೊಬ್ಬರಗಳು, ಮೈಲ್ ತುತ್ತು, ಕೀಟನಾಶಕಗಳು, ಬ್ರಷ್ ಕಟ್ಟರ್, ವುಡ್ ಕಟ್ಟರ್, ಮದ್ದು ಸಿಂಪಡನೆ ಸ್ಪ್ರೇಯರ್ ಹಾಗೂ ಎಲ್ಲಾ ರೀತಿಯ ಕೃಷಿ ಸಾಮಗ್ರಿಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯವಿರಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7337614753, 7899874753


