ನೆರಿಯ : ಶಾಲೆಯಿಂದ ಮನೆಗೆ ತೆರಳುವಾಗ ಬಸ್ ನಲ್ಲಿ ಬಾಲಕನ ಕಾಲಿಗೆ ಬಲವಾದ ಗಾಯ !

ನೆರಿಯ, ಜೂ. 18 : ಶಾಲೆ ಬಿಟ್ಟು ಕೆ.ಎಸ್.ಆರ್. ಟಿ.ಸಿ.ಬಸ್ ನಲ್ಲಿ ಮನೆಗೆ ತೆರಳುವಾಗ ಎಂಟನೇ ತರಗತಿಯ ಬಾಲಕನ ಕಾಲಿಗೆ ಬಲವಾಗಿ ಕೊಯ್ದ ಗಾಯವಾದ ಘಟನೆ ನಡೆದಿದೆ. ಮುಂಡಾಜೆಯ ಖಾಸಗಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ, ನೆರಿಯ ನೆಕ್ಕರೆ ಪಿ.ಆರ್. ಶಾಜಿ ಮತ್ತು ಸೌಮ್ಯ ದಂಪತಿಯ ಪುತ್ರ ಅರುಣ್ ಗಾಯಗೊಂಡವರು.

Advertisement

ಜೂ. 11ರಂದು ಸಂಜೆ ಬಸ್ ನಲ್ಲಿ ತೆರಳುವಾಗ ಈ ಘಟನೆ ನಡೆದಿದೆ. ಬಲ ಕಾಲಿನ ತೊಡೆ ಭಾಗ ಕತ್ತರಿಸಿದಂತಾಗಿದ್ದು ಹಾಕಿದ್ದ ಜೀನ್ಸ್ ಪ್ಯಾಂಟ್ ಹರಿದು, ರಕ್ತಸ್ರಾವವಾಗಿದೆ. ನೋವು ತಡೆದುಕೊಂಡು ನೆಕ್ಕರೆಯಲ್ಲಿರುವ ತನ್ನ ಮನೆಗೆ ಬಂದು ನೋಡಿದಾಗ ಗಾಯದ ತೀವ್ರತೆ ಗೊತ್ತಾಗಿದೆ.

ಕೂಡಲೇ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೀಗಿ ಚಿಕಿತ್ಸೆ ಕೊಡಿಸಿದ್ದು ನಾಲ್ಕು ಸ್ವಿಚ್ ಹಾಕಲಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.