ಬೆಳ್ತಂಗಡಿ, ಫೆ. 20 : ಕುತ್ಯಾರು ಫ್ರೆಂಡ್ಸ್ ಬೆಳ್ತಂಗಡಿ ಅರ್ಪಿಸುವ, ಶಾಸಕರಾದ ಶ್ರೀ ಹರೀಶ್ ಪೂಂಜ ರವರ ಮಾರ್ಗದರ್ಶನದಲ್ಲಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರೋತ್ಸವದ ಮಹಾ ರಥೋತ್ಸವದ ಪ್ರಯುಕ್ತ ನಡೆದ ಬೆಳ್ತಂಗಡಿ ಮ್ಯೂಸಿಕಲ್ ನೈಟ್ಸ್ ಅತ್ಯಂತ ಯಶಸ್ವಿಯಾಗಿ ನಡೆದಿದೆ.

ಜಿಲ್ಲೆಯ ಹೆಸರಾಂತ ಗಾಯಕರಾದ ಪೊಲ್ಲಚ್ಚಿ ಮುತ್ತು, ಸಂದೇಶ್ ಬಾಬಣ್ಣ, ದಿಲ್ಜಿಶ, ಮಹಿಮಾ ಭಂಡಾರಿ, ಕೆ.ಪಿ. ಮಿಲನ್ ಕುಮಾರ್, ಪಲ್ಲವಿ ಪ್ರಭು ಹಾಗೂ ಮ್ಯೂಸಿಷಿಯನ್ ಗಳಾಗಿ ಪ್ರದೀಪ್ ಆಚಾರ್ಯ, ಅರುಣ್ ಹಾವಂಜೆ, ರೋಷನ್ ಬೇಳ, ಡಾಲ್ವಿನ್ ಕೊಳಲಗಿರಿ, ಪ್ರತಾಪ್ ಆಚಾರ್ಯ ಮನರಂಜಿಸಿದರು. ಮಂಗಳೂರಿನ ವಿಜೆ ಮಧುರಾಜ್ ನಿರೂಪಣೆ ಗೈದರು. ಉಜಿರೆಯ ಡಿಡಿಎಫ್ ಡೈನಾಮಿಕ್ ಡ್ಯಾನ್ಸ್ ಫ್ಯಾಕ್ಟರಿ ತಂಡದಿಂದ ಡ್ಯಾನ್ಸ್ ಧಮಾಕ ಕಾರ್ಯಕ್ರಮ ನೆರವೇರಿತು.


ಈ ಅಮೋಘವಾದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಸಂಪೂರ್ಣ ಕಾರ್ಯಕ್ರಮವನ್ನು ಧ್ವನಿ ನ್ಯೂಸ್ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ.

