ಮಂಗಳೂರು, ಜ. 08 : ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ ಸ್ಟೆಬಲ್ ಓರ್ವರ ಬೈಕ್ ನಿಲ್ಲಿಸಿದ ಅರ್ಧ ಗಂಟೆಯಲ್ಲಿ ಕಳವು ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಪೊಲೀಸ್ ಕಾನ್ ಸ್ಟೆಬಲ್ ಪುನೀತ್ ಬಿ.ವೈ ಅವರು ಜ.5ರಂದು ಕೆ.ಬಿ.ಕಟ್ಟೆಯಲ್ಲಿ ಕರ್ತವ್ಯಕ್ಕಾಗಿ ಸಂಜೆ 5.30 ಕ್ಕೆ ತಂದೆಯ ಹೆಸರಿನಲ್ಲಿರುವ ಹೋಂಡಾ ಶೈನ್ ಬೈಕ್ ನಲ್ಲಿ ಬಂದು ಅಲ್ಲಿನ ಸುಲಭ್ ಶೌಚಾಲಯದ ಪಾವತಿ ವಾಹನ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿ, ಕೆ.ಬಿ ಕಟ್ಟೆ ಜಂಕ್ಷನ್ ನಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದರು.
ಅನಂತರ ಸುಮಾರು 6 ಕ್ಕೆ ವಾಪಸು ಬಂದು ನೋಡಿದಾಗ ಬೈಕ್ ಕಳವಾಗಿತ್ತು ಎನ್ನಲಾಗಿದೆ. ಪೊಲೀಸರ ಬೈಕೆ ಕಳವಾಗುವಾಗ ಜನಸಾಮಾನ್ಯರ ಪಾಡೇನು ಎಂದು ಸಾರ್ವಜನಿಕರು ವಿಷಾದ ವ್ಯಕ್ತಪಡಿಸುತ್ತಿದ್ದರು.

