ಬೆಳ್ತಂಗಡಿ : ಬಿಜೆಪಿ ವತಿಯಿಂದ VBG RAM G ಜನಜಾಗೃತಿ ಮೂಡಿಸಲು ಬೃಹತ್ ಜಾಥಾ – ಸಾರ್ವಜನಿಕ ಸಭೆ

ಬೆಳ್ತಂಗಡಿ, ಫೆ. 16 : ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಹಾಗೂ ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯ ಮಿಷನ್ ಗ್ಯಾರಂಟಿ ಗ್ರಾಮೀಣ VBG RAM G ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿನ ಭ್ರಷ್ಟಾಚಾರವನ್ನು ತೊಡೆದು ಹಾಕಲು ಹಾಗೂ ಕೇಂದ್ರ ಸರ್ಕಾರದ ಹೊಸ ಕಾಯ್ದೆಯ ಗೆ ಜನಜಾಗೃತಿ ಮೂಡಿಸಲು ಇಂದು ಬೆಳ್ತಂಗಡಿ ಶಾಸಕರ ಶ್ರಮಿಕರ ಕಚೇರಿಯಿಂದ ಸಮಾಜ ಮಂದಿರದವರೆಗೆ ಬೃಹತ್ ಜಾಥಾ ನಡೆಯಿತು.

Advertisement

ಬಳಿಕ ಸಮಾಜ ಮಂದಿರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ಧೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ಅವರು, ವಿಬಿಜಿ ರಾಮ್ ಜಿ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದೇ ಈ ಯೋಜನೆಗೆ ಕೇಂದ್ರ 60% ಕೊಟ್ಟರೆ, ರಾಜ್ಯ ಸರ್ಕಾರ 40% ಅನುದಾನ ಭರಿಸಬೇಕಾಗುತ್ತದೆ. ಆದರೆ, ಖಜಾನೆ ಖಾಲಿಯಾಗಿರುವ ಸರ್ಕಾರಕ್ಕೆ ಇನ್ನೂ ಎರಡೂವರೆ ವರ್ಷ ಅನುದಾನ ನೀಡಲು ಸಾಧ್ಯವಿಲ್ಲದಂತಾಗಿದೆ. ರಾಜ್ಯದ ಗ್ರಾಮ ಪಂಚಾಯತ್ ಗಳು ಕೇಂದ್ರ ಸರ್ಕಾರದ ಅನುದಾನದಿಂದ ಮಾತ್ರ ಜನಸೇವೆ ಮಾಡುವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಕೇಂದ್ರದಿಂದ ಬಂದಿರುವ 1200 ಕೋ.ರೂ. ಹಣ ಎಲ್ಲಿಗೆ ವಿನಿಯೋಗ ಆಗಿದೆ, ಯಾರು ತಿಂದಿದ್ದಾರೆ ? ಎಂಬುದೇ ಗೊತ್ತಿಲ್ಲ ಎಂದರು.

ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಂಡಿರದಂತಹ ಭ್ರಷ್ಟಾಚಾರ ನಡೆಯುತ್ತಿದೆ. ವಾಲ್ಮೀಕಿ ಹಗರಣ ನಡೆಸಿ, ತೆಲಂಗಾಣ ಚುನಾವಣೆಗೆ ಬಳಸಿಕೊಂಡಿದ್ದೀರಿ. ಅಬಕಾರಿ ಇಲಾಖೆಯಲ್ಲಿ ಸುಮಾರು 6000 ಸಾವಿರ ಕೋ.ರೂ. ಹಗರಣ ನಡೆಸಿ ಮಹರಾಷ್ಟ್ರ ಚುನಾವಣೆಗೆ ಬಳಸಿದಿರಿ. ಅಲ್ಲದೆ, ಈ ಹಣ ಯಾರ ಯಾರ ಕಿಸೆಗೆ ಹೋಗಿದೆ, ಯಾರ ಕುಟುಂಬಕ್ಕೆ ಹೋಗಿದೆ, ಸೋನಿಯಾಗಾಂಧಿಗೆ ಎಷ್ಟು ಸೂಟ್ ಕೇಸ್ ಹೋಗಿದೆ, ರಾಹುಲ್ ಗಾಂಧಿಗೆ ಎಷ್ಟು ಸೂಟ್ ಕೇಸ್ ಹೋಗಿದೆ ಎಂಬುದೂ ಜನರಿಗೆ ಗೊತ್ತಿದೆ. ಬಜೆಟ್ ಭಾಷಣ ಸಿದ್ಧರಾಮಯ್ಯನವರು ಈ ರಾಜ್ಯಕ್ಕೆ ಇಷ್ಟು ಅನುದಾನ ನೀಡಿದೆ ಎಂದು ಎದೆತಟ್ಟಿ ಹೇಳಿಕೊಳ್ಳುವ ಭಾಷಣ ಇಲ್ಲ. ಈಗ ಭಾಷಣ ಮಾಡುವಾಗ ಹೆಸರಿಲ್ಲದ ವಿದೇಶಿಗರು ಹೊಗಳಿದ್ದಾರೆಂದು ಹೇಳುತ್ತಾರೆ. ಆದರೆ, 16 ಬಾರಿ ಬಜೆಟ್ ಮಂಡಿಸಿರುವ ಸಿದ್ಧರಾಮಯ್ಯನವರಿಗೆ ಯಾರೋ ಹೇಳಿದ್ದನ್ನು ತಮ್ಮ ಸರ್ಕಾರದ ಹೊಗಳಿಕೆ ಎಂದು ಹೇಳಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದಿತ್ತು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಳಿಕ ಮಾತನಾಡಿದ ವಿಧಾನಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ಅವರು, ರಫೇಲ್ ಬಗ್ಗೆ ಆರೋಪಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದಾಗ ಮಾಧ್ಯಮಮಿತ್ರರು ಪ್ರತಿಭಟನಾಕಾರರಲ್ಲಿ ರಫೇಲ್ ಬಗ್ಗೆ ಕೇಳಿದಾಗ ಅವರಿಗೆ ಅದರ ಮಾಹಿತಿಯೇ ಇರಲಿಲ್ಲ. ಅಂತಹುದೇ ಪರಿಸ್ಥಿತಿ ಈಗ VBG RAM G ಯೋಜನೆಯಲ್ಲಿದೆ. ಕೇಂದ್ರದ ಈ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ಯೋ, ಅಲ್ಲಿ ಹೋಗಿ VBG RAM Gಯ ಫುಲ್ ಫಾರ್ಮ್ ಕೇಳಿದರೆ ಅದರ ಬಗ್ಗೆಯೂ ಅವರಿಗೆ ಗೊತ್ತಿರಲು ಸಾಧ್ಯವಿಲ್ಲ. ಈಗ ರಾಜ್ಯದಲ್ಲಿ ಏನು ಮುಖ್ಯಮಂತ್ರಿ ಖುರ್ಚಿಗಾಗಿ ಪೈಪೋಟಿ ನಡೆಯುತ್ತಿದೆಯೋ ಅದರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಪ್ರತಿಭಟನೆಯ ನಾಟಕವಾಡುತ್ತಿದೆ ಎಂದರು.

ಅಲ್ಲದೇ, ಸಿಎಂ ಖುರ್ಚಿ ಒಪ್ಪಂದದಂತೆ ಸಿದ್ಧರಾಮಯ್ಯನವರ ಅವಧಿ ಮುಗಿದಿದೆ. ಡಿಕೆಶಿಯವರು ಸಿಎಂ ಖುರ್ಚಿ ಬಿಟ್ಟುಕೊಡಲು ಹೇಳುವಾಗ ಸಿದ್ಧರಾಮಯ್ಯನವರು VBG RAM G ಎಂದು ಹೇಳುತ್ತಾರೆ. ಅಂದರೆ, ಸಿಎಂ ಖುರ್ಚಿಯನ್ನು ಮತ್ತಷ್ಟು ದಿನ ಮುಂದೂಡುವ ಕಾರಣಕ್ಕಾಗಿ ಈಗ ರಾಜ್ಯದಲ್ಲಿ VBG RAM G ಬಗ್ಗೆ ವ್ಯರ್ಥ ಹೋರಾಟವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ವ್ಯಂಗವಾಡಿದರು.

ಸಭೆಯಲ್ಲಿ, ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷ ಶ್ರೀನಿವಾಸ್ ರಾವ್, ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಉಪಾಧ್ಯಕ್ಷ ಜೋಯಲ್ ಮೆಂಡೋನ್ಸ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಮಹಿಳಾ ಕಾರ್ಯದರ್ಶಿ ವಸಂತಿ ಮಚ್ಚಿನ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಜಯಂತ್ ಕೋಟ್ಯಾನ್, ಮನ್ ಕಿ ಬಾತ್ ಜಿಲ್ಲಾ ಪ್ರಮುಖ್ ಸೀತಾರಾಮ್ ಬೆಳಾಲ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ ಉಪಸ್ಥಿತರಿದ್ದರು. ಲಾಯಿಲ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅರವಿಂದ ಲಾಯಿಲ ನಿರೂಪಣೆಗೈದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.