ಕಾರ್ಕಳ : ಸೈಕಲ್ ಸವಾರನಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿ, ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ಮೂವರು ಗಾಯಗೊಂಡಿರುವ ಘಟನೆ ಹಿರ್ಗಾನ ಗ್ರಾಮದ ಮೂಜೂರು ಬಳಿ ನಡೆದಿದೆ.
ಚಾಲಕ ಪಂಚಾಯತ್ ರಾಜ್ ಇಂಜಿನಿಯರ್, ಅವರ ಪತ್ನಿ ಹಾಗೂ ಮಗ ಗಾಯಗೊಂಡವರೆಂದು ತಿಳಿದು ಬಂದಿದೆ. ಮೂಜೂರು ಬಳಿ ಸೈಕಲ್ ಸವಾರನೊಬ್ಬ ರಸ್ತೆಗೆ ಅಡ್ಡ ಬಂದಿದ್ದಾನೆ. ಈ ವೇಳೆ ಸೈಕಲ್ ಸವಾರನಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲೆತ್ನಿಸಿದಾಗ ಅಪಘಾತ ಸಂಭವಿಸಿದೆ. ಇನ್ನು, ಈ ಅಪಘಾತದ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

