ಧರ್ಮಸ್ಥಳ : ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಇಂದಿನಿಂದ ಲಕ್ಷದೀಪೋತ್ಸವ ಆರಂಭಗೊಂಡಿದೆ. ಇಂದು ಬೆಳಗ್ಗೆ ಶ್ರೀ ಕ್ಷೇತ್ರದಿಂದ ವರ್ಷಂಪ್ರತಿ ನಡೆಯುವ ರಾಜ್ಯಮಟ್ಟದ ವಸ್ತುಪ್ರದರ್ಶನ ಉದ್ಘಾಟನೆಗೊಂಡಿತು. ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರು ದೀಪ ಪ್ರಜ್ವಲಿಸಿ, ಉದ್ಘಾಟನೆಗೊಳಿಸಿದರು. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರಾಜ್ಯಮಟ್ಟದ ವಸ್ತುಪ್ರದರ್ಶನಕ್ಕೆ ದೀಪ ಪ್ರಜ್ವಲಿಸಿ, ಶುಭಾಶಿರ್ವಾದಗೈದರು.




ಧರ್ಮಸ್ಥಳ ಲಕ್ಷದೀಪೋತ್ಸವವು ನ. 15ರಂದು ಆರಂಭಗೊಂಡು ನವೆಂಬರ್ 20ಕ್ಕೆ ಸಮಾಪಣೆಗೊಳ್ಳಲಿದೆ.

