ಧರ್ಮಸ್ಥಳ : ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವದ ಅಂಗವಾಗಿ ೯೩ನೇ ಸರ್ವಧರ್ಮ ಸಮ್ಮೇಳನವು ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು. ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಶಾರದಾ ಲಕ್ಷ್ಮೀನೃಸಿಂಹ ಪೀಠಂ, ಶ್ರೀ ಮಠ, ಹರಿಹರಪುರದ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿಯವರು ಇಡೀ ವಿಶ್ವಕ್ಕೆ ಭಾತೃತ್ವ, ಶಾಂತಿಯ ಸಂದೇಶ ಸಾರಿದ್ದಾರೆ. ಅಧ್ಬುತ ಮಾತುಗಾರಿಕೆಯ ಮೂಲಕ ನೆರೆದಿದ್ದ ಸಹಸ್ರಾರು ಮಂದಿಯನ್ನು ಮಂತ್ರಮುಗ್ಧಗೊಳಿಸಿತು. ನಮ್ಮ ಜೀವನಕ್ಕೊಂದಷ್ಟು ಸಂದೇಶ, ಭಾರತೀಯ ಸಂಸ್ಕೃತಿ ಇಡೀ ಮನುಕುಲಕ್ಕೆ ಕೊಟ್ಟ ಸಂದೇಶ ಬಹಳ ಅರ್ಥಪೂರ್ಣವಾಗಿತ್ತು. ಶ್ರೀ’ಗಳ ಅದ್ಭುತ ಭಾಷಣದ ಸಂಪೂರ್ಣ ವೀಡಿಯೋ ತುಣುಕು ಇಲ್ಲಿದೆ, ನಿಮ್ಮ ಬದುಕಿಗೂ ದಾರಿದೀಪವಾಗಬಹುದು ಕೇಳಿ…….

