ಗುರುವಾಯನಕೆರೆ : ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಗಳು ಗುರುವಾಯನಕೆರೆ ಇದರ ಪ್ರಾಯೋಜಕತ್ವದಲ್ಲಿ, ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ಇವರ ನೇತೃತ್ವದಲ್ಲಿ ಎಕ್ಸೆಲ್ ಕಾಲೇಜು ಆವರಣದಲ್ಲಿ ಇಂದು ಸಂಜೆ 6:00 ಗಂಟೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟವು ವಿದ್ಯುದೀಪಲಂಕೃತವಾದ ಭವ್ಯ ರಂಗಮಂಟಪದಲ್ಲಿ ನಡೆಯಲಿದೆ.
ಸಂಜೆ 6:00 ಗಂಟೆಯಿಂದ ಯಕ್ಷಗಾನ ಆರಂಭಗೊಳ್ಳಲಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ರಾತ್ರಿ 9:00 ಗಂಟೆಯ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಕಾಲೇಜು ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಈ ಯಕ್ಷಗಾನ ಕಾರ್ಯಕ್ರಮವು ನಿಮ್ಮ ನೆಚ್ಚಿನ “ಧ್ವನಿ ನ್ಯೂಸ್ ಹಾಗೂ ಎಕ್ಸೆಲ್ ಕಾಲೇಜು ಯೂ ಟ್ಯೂಬ್ ಚಾನೆಲ್”ನಲ್ಲಿ ನೇರಪ್ರಸಾರಗೊಳ್ಳಲಿದೆ.


