ಬಂಟ್ವಾಳ : 15 ವರ್ಷ ಹಡಿಲು ಬಿದ್ದ 10ಎಕರೆ ಭೂಮಿಯಲ್ಲಿ ಕೃಷಿ ಆರಂಭ



ಬಂಟ್ವಾಳ, ಡಿ. 05 : ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಲೊರೋಟೋ ಹಿಲ್ಸ್  ಸ್ಥಾಪಕಾಧ್ಯಕ್ಷ, ಪ್ರಗತಿಪರ ಕೃಷಿಕ ಅವಿಲ್ ಮಿನೇಜಸ್ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಪ್ರಗತಿಪರ ಕೃಷಿಕ ದಿವಂಗತ ಬಿ. ಸದಾನಂದ ಪೂಂಜ ಇವರ ಪುತ್ರ ಗ್ರಾ. ಪಂ. ಮಾಜಿ ಅಧ್ಯಕ್ಷ ಶೋಭಿತ್ ಪೂಂಜ ನೇತೃತ್ವದಲ್ಲಿ, ಮತ್ತು ಸಜೀಪ ದಸರಾ 2026 ಶತಮಾನೋತ್ಸವ ಸಮಿತಿ ಇದರ ಆಶ್ರಯದಲ್ಲಿ ಪಾಳು ಬಿದ್ದ 10 ಎಕರೆ ಗದ್ದೆಯಲ್ಲಿ ನೇಜಿ ನಾಟಿ ನಡೆಸುವ ಕಾರ್ಯಕ್ರಮ ಇಂದು ಸಜೀಪ ಮೂಡ ಗ್ರಾಮದ ಕಾಂತಾಡಿಯಲ್ಲಿ ನಡೆಯಿತು.

Advertisement



ಬೆಲೆ ಏರಿಕೆ ನಡುವೆಯೂ ವಿವಿಧ ರೋಗ ಭಾದೆ ಯಿಂದ ಕಳೆಗುಂದುತ್ತಿರುವ ಅಡಿಕೆ ಬೆಳೆಗೆ ಪರ್ಯಾಯವಾಗಿ ಮರೆಯಾಗುತ್ತಿರುವ ಭತ್ತ ಬೇಸಾಯದತ್ತ  ಇವರು ಚಿತ್ತ ಹರಿಸಿದ್ದು, ನೇಜಿ ನಾಟಿ’ ಪ್ರಾತ್ಯಕ್ಷಿಕೆ* ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮ ದಲ್ಲಿ ಸ್ಥಳೀಯ ಹಿ. ಪ್ರಾ ಶಾಲೆ ವಿದ್ಯಾರ್ಥಿಗಳು ಕೂಡಾ ಭಾಗವಹಿಸಿದ್ದು.ಸಜೀಪ ಮಾಗಣೆಯ ತಂತ್ರಿಗಳಾದ ಎಂ ಸುಬ್ರಹ್ಮಣ್ಯ ಭಟ್ ಹಾಗೂ ಸುಭಾಷ್ ಯುವಕ ಮಂಡಲ ಅಧ್ಯಕ್ಷರಾದ ಶ್ರೀ ಶ್ರೀಕಾಂತ್ ಶೆಟ್ಟಿ ಸಂಕೇಶ ಹಾಗೂ ಪ್ರಗತಿಪರ ಕೃಷಿಕ ಅವಿಲ್ ಮಿನೇಜಸ್ ಮತ್ತು ಶ್ರೀದೇವಿ ಪ್ರಸಾದ್ ಪೂಂಜ
ಚಾಲನೆ‌ ನೀಡಿದರು. ಸಜೀಪ‌ಮೂಡ ಶಾಲೆಯ ಮಕ್ಕಳೂ ಕೂಡ ಈ ಸಂದರ ಕಾರ್ಯಕ್ರಮದಲ್ಲಿ ಗದ್ದೆಗಿಳಿದು ನೇಜಿ ನಾಟಿ ಕಾರ್ಯಕ್ರಮದಲ್ಲಿ ಜೊತೆಯಾಗಿದ್ದಾರೆ.



ಇನ್ನು ಕಾರ್ಯಕ್ರಮದಲ್ಲಿ ಶ್ರೀ ದೇವಿಪ್ರಸಾದ್ ಪೂಂಜಾ ,ಯೋಗಿಶ್ ಬೆಳ್ಚಾಡ ಕಿಶೋರ್ ಅಗರಿ ,ಗಿರೀಶ್ ಕುಮಾರ್ ಪೆರ್ವ,ನವೀನ್ ಆಳ್ವಾ ,ಸಿದ್ಧಿಕ್ ಕೊಳಕೆ ,ಶಾಲ ಸಹ ಶಿಕ್ಷಕಿ ಜೆಸಿಂತಾ,ವಿಶ್ವಾನಾಥ್ ಕೊಟ್ಟಾರಿ,ಶ್ರೀನಾಥ್ ಶೆಟ್ಟಿ,ಪಂಚಾಯತ್ ಪಿ.ಡಿ.ಓ ಶ್ರೀಮತಿ ಮಾಯಕುಮಾರಿ ,ರಮೇಶ್ ಪಣೋಲಿಬೈಲು , ಹಮೀದ್ ಮತ್ತು ಅಬ್ದುಲ್ ಕೆರಿಮ್, ರೋಟರಿ ಕ್ಲಬ್ ಅಧ್ಯಕ್ಷ -ವಿಜಯ್ ಫೆರ್ನಾಂಡಿಸ್ ,ಸ್ಥಾಪಕ ಸದಸ್ಯರು- ಸೆಬೆಸ್ಟಿಯನ್ ಮೆನೇಜಸ್, ಪೂರ್ವ ಅಧ್ಯಕ್ಷರು ಆಂಟೊನಿ ಸಿಕ್ವೇರಾ ಹಾಗೂ ಯುವಕ ಮಂಡಲದ ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.