ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 2025ರ ಅತಿ ದೊಡ್ಡ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜೆಸಿ ಉತ್ಸವ ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರು ಜೆಸಿ ಆಶಾಲತಾ ಪ್ರಶಾಂತ್, ವಲಯ ಉಪಾಧ್ಯಕ್ಷರು ಜೆಎಫ್ಎಂ ರಂಜಿತ್ ಎಚ್ ಡಿ, ಪೂರ್ವ ಅಧ್ಯಕ್ಷರು ಜೆಸಿ ಸುಭಾಷ್ಚಂದ್ರ ಎಂಪಿ, ಪ್ರಶಾಂತ್ ಲಾಯಿಲ ಸಪ್ತಾಹ ಸಂಯೋಜಕರು ಜೆಸಿ ರಕ್ಷಿತ್ ಅಂಡಿಂಜೆ, ಜೆ ಸಿ ರಜತ್ ಮೋರ್ತಾಜೆ, ಲೇಡಿ ಜೇಸಿ ಸಂಯೋಜಕರು ಜೆಎಫ್ಎಂ ಚಿತ್ರಪ್ರಭ, ಕಾರ್ಯದರ್ಶಿ ಜೆಸಿ ಪ್ರಮೋದ್, ಸದಸ್ಯರು ಸಮನ್ವತ್ ಉಪಸ್ಥಿತರಿದ್ದರು.

