ಬೆಳ್ತಂಗಡಿ, ಡಿ. 09 : ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 2026 ನೇ ಸಾಲಿನ ಘಟಕದ 49ನೇ ವರ್ಷದ ಅಧ್ಯಕ್ಷರಾಗಿ ತಾಲೂಕಿನ ಹೆಸರಾಂತ ನೃತ್ಯ ತಂಡ ಬೀಟ್ ರಾಕರ್ಸ್ ನ ಮಾಲಕರಾಗಿರುವ ಜೆಸಿ ಜಿತೇಶ್ ಹಾಗೂ ಹಲವಾರು ಸಂಘ ಸಂಸ್ಥೆ ಗಳಲ್ಲಿ ತೊಡಗಿಸಿಕೊಂಡಿರುವ ಜೆಸಿ ರಕ್ಷಿತ್ ಬಂಗೇರ ಅಂಡಿಂಜೆಯವರು ಕಾರ್ಯದರ್ಶಿಯಾಗಿ ಆಯ್ಕೆಗೊಂಡರು.
ಮುಂದಿನ ವರ್ಷದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಗಳ ಆಯ್ಕೆ ಯನ್ನು ಘಟಕದ ನಿಕಟ ಪೂರ್ವಧ್ಯಕ್ಷರಾದ ಹಾಗೂ ಅಧ್ಯಕ್ಷರ ಆಯ್ಕೆ ಸಮಿತಿ ಯ ಛೇರ್ಮನ್ ಆಗಿರುವ ಜೆಸಿ ರಂಜಿತ್ ಎಚ್ ಡಿ ಯವರು ನೆರವೇರಿಸಿದರು. ಈ ವರ್ಷದ ಘಟಕದ ಅಧ್ಯಕ್ಷರಾದ ಜೆಸಿ ಆಶಾಲತಾ ಪ್ರಶಾಂತ್ ರವರು ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಹೆಸರನ್ನು ಘೋಷಿಸಿದರು . ಈ ಸಂದರ್ಭದಲ್ಲಿ ಘಟಕದ ಪೂರ್ವಧ್ಯಕ್ಷರುಗಳಾದ ಸ್ವರೂಪ್ ಶೇಖರ್, ಪ್ರಸಾದ್ ಬಿ ಎಸ್, ಶಂಕರ್ ರಾವ್, ಚಿದಾನಂದ ಇಡ್ಯಾ, ನಾರಾಯಣ ಶೆಟ್ಟಿ, ಪ್ರಶಾಂತ್ ಲಾಯಿಲ, ಕಿರಣ್ ಕುಮಾರ್ ಶೆಟ್ಟಿ, ಸಂತೋಷ ಪಿ ಕೋಟ್ಯಾನ್, ಶ್ರೀನಾಥ್ ಕೆ ಎಮ್, ಕೇಶವ್ ಪೈ ಉಪಸ್ಥಿತರಿದ್ದರು.


