ಬೆಳಾಲು : ಉಜಿರೆ – ಬೆಳಾಲು-ಬಂದಾರು ಮುಖ್ಯರಸ್ತೆಯ ಬೆಳಾಲು ಗ್ರಾಮ ಕಾಡಂಡ ಬಳಿ ಗೇರು ತೋಟದಲ್ಲಿ ಕಾಡುಕೋಣವೊಂದು ಪ್ರತ್ಯಕ್ಷಗೊಂಡ ಘಟನೆ ನಡೆದಿದೆ. ಹಲವಾರು ತಿಂಗಳುಗಳಿಂದ ಆ ಪ್ರದೇಶದಲ್ಲಿ ಕಾಡುಕೋಣ ತಿರುಗಾಡುತ್ತಿದೆ ಎನ್ನುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಡಿಕೆ ಇನ್ನಿತರ ಕೃಷಿ, ಕೃಷಿಗೆ ಅಳವಡಿಸಿರುವ ನೀರಾವರಿ ಪೈಪ್ ಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಕೃಷಿಕರು ಕಾಡುಪ್ರಾಣಿಗಳ ಉಪಟಳದಿಂದ ಬೇಸತ್ತು ಹೋಗಿದ್ದಾರೆ. ಈ ಬಗ್ಗೆ ತಕ್ಷಣವೇ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

