ಬಂಟ್ವಾಳ, ಜ. 04 : ತಾಲೂಕಿನ ಸಜೀಪಮೂಡ ಗ್ರಾಮದ ಮಿತ್ತಮಜಲು ಕ್ಷೇತ್ರದ ದ್ವಾರದ ಬಳಿ ಇರುವ ಕಾಣಿಕೆ ಡಬ್ಬಿಗೆ ಕೈ ಹಾಕಿದ್ದು …ಕದಿಯುವಾಗಲೇ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಪೊಲೀಸರ ಅಥಿತಿಯಾಗಿದ್ದಾನೆ.

ಸ್ಥಳೀಯ ನಿವಾಸಿ ಓರ್ವ ಯುವಕ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಸಜೀಪಮೂಡದ ಕಾರಣಿಕ ಕ್ಷೇತ್ರವಾಗಿರುವ ಮಿತ್ತಮಜಲು ದ್ವಾರದ ಬಳಿ ಇರುವ ಕಾಣಿಕೆ ಡಬ್ಬಿಗೆ ಕಣ್ಣು ಹಾಕಿ ಕದಿಯುವಾಗ ಮುಂಭಾದಲ್ಲಿರುವ ರಾಮಮಂದಿರದಲ್ಲಿದ್ದ ಅಯ್ಯಪ್ಪ ಮಾಲಾಧಾರಿಗಳು ವಿಡಿಯೋ ಮಾಡಿ ಕ್ಷೇತ್ರದ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದು ,ತಕ್ಷಣ ಅಯ್ಯಪ್ಪ ಮಾಲಾಧಾರಿಗಳು ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಜೀಪದ ಮಿತ್ತಮಜಲು ಕ್ಷೇತ್ರ ಬಹಳ ಕಾರಣಿಕದ ಕ್ಷೇತ್ರವಾಗಿದ್ದು ..ಇದಕ್ಕಿಂತ ಮುಂಚೆ ಎರಡು ಬಾರಿ ಕಾಣಿಕೆ ಡಬ್ಬಿಗೆ ಕೈ ಹಾಕಿದ್ದು…ಹಣವನ್ನ ಕದ್ದು ಹೋಗಲು ಆತನಿಗೆ ಸಾಧ್ಯವಾಗಲ್ಲಿ…ಇದೀಗ ಮತ್ತೆ ಆತ ಕಳ್ಳತನಕ್ಕೆ ಪ್ರಯತ್ನಿಸಿದರೂ ದೈವಗಳ ಕಾರಣಿಕದಿಂದ ಸಿಕ್ಕಿಬಿದ್ದಿದ್ದಾನೆ.


