ಕಾರ್ಕಳ : ತಾಲೂಕಿನ ಮೂರೂರು-ಹಿರ್ಗಾನ ಗ್ರಾಮದ ಬಿ.ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026ರ ಜನವರಿ 17ರಂದು ಶಾಲಾ ವಾರ್ಷಿಕೋತ್ಸವವು ಅತ್ಯಂತ ಅದ್ಧೂರಿಯಾಗಿ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಶಾಲಾ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಎಸ್. ಶೆಟ್ಟಿ ಮಂಗಳೂರು ವಿರಚಿತ “ಅಕ್ಕ” ತುಳು ನಾಟಕದ ಶುಭ ಮುಹೂರ್ತ ಶ್ರೀ ಕುಂದೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಕೃಷ್ಣ ರಾಜೇಂದ್ರ ಭಟ್ ಇವರ ನೇತೃತ್ವದಲ್ಲಿ ನಡೆಯಿತು. ಅಲ್ಲದೆ, ಶಾಲಾ ಹಳೆ ವಿದ್ಯಾರ್ಥಿಗಳಿಂದ ನಡೆಯಲಿರುವ, ದಿನಕರ ಭಂಡಾರಿ ಕಣಂಜಾರು ಇವರ ರಚನೆಯ “ಪಿರ ಬನ್ನಗ….” ತುಳು ಹಾಸ್ಯಮಯ ನಾಟಕದ ಮುಹೂರ್ತವು ನೆರವೇರಿತು. ವಿಭಿನ್ನ ಕಥಾ ಹಂದರದ ಜೊತೆಗೆ ಕೌಟುಂಬಿಕ, ಸಾಮಾಜಿಕ ಹಾಗೂ ಹಾಸ್ಯಮಯ ನಾಟಕವಾಗಿದೆ.

