ಗರ್ಡಾಡಿ, ಡಿ. 12 : 6ನೇ ವರ್ಷದ ಅಮ್ಮ ನಡೆಗೆ ನಮ್ಮ ನಡೆ ಪಾದಯಾತ್ರೆಯು ಡಿ. 11ರಂದು ಗರ್ಡಾಡಿಯ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಿಂದ ಪಾದಯಾತ್ರಿಗಳು ಹೊರಟರು. ಇಂದು ಬೆಳಗ್ಗೆ ಕಟೀಲು ಕ್ಷೇತ್ರ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಯು ಸಂಪನ್ನಗೊಂಡಿತು.
ಗರ್ಡಾಡಿಯ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಾದಯಾತ್ರಿಗಳು ವಿಶೇಷ ಪೂಜೆಯನ್ನು ಸಲ್ಲಿಸಿ, ಪಾದಯಾತ್ರೆ ಆರಂಭಿಸಿದ್ದರು. ಸತತ ಆರು ವರ್ಷಗಳಿಂದ ವೃತಧಾರಿಗಳಾಗಿ, ಪಾದರಕ್ಷೆ ಧರಿಸದೆ ಗರ್ಡಾಡಿಯಿಂದ, ಕಟೀಲು ಕ್ಷೇತ್ರದವರೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ.

