ಮೂಡುಬಿದಿರೆ, ಡಿ. 03 : ಮದುವೆ ಬೆಂಗಾವಲು ಬಸ್ ನೊಳಗಡೆ ಬೃಹತ್ ಹೆಬ್ಬಾವೊಂದು ಪ್ರತ್ಯಕ್ಷವಾಗಿರುವ ಘಟನೆಯೊಂದು ವರದಿಯಾಗಿದೆ. ಹೆಬ್ಬಾವನ್ನು ಉರಗರಕ್ಷಕ ಸುರಕ್ಷಿತವಾಗಿ ಅರಣ್ಯಕ್ಕೆ ಸ್ಥಳಾಂತರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜೈನ್ ಪೇಟೆಯ ಹೋಟೆಲ್ ವೊಂದರ ಬಳಿ ಕಾಫಿ ವಿರಾಮಕ್ಕಾಗಿ ಬಸ್ ನಿಲ್ಲಿಸಲಾಗಿತ್ತು. ಪ್ರಯಾಣಿಕರು ಇಳಿದು ಹೋದ ಬಳಿಕ ಚಾಲಕ ಬಸ್ ನೊಳಗಡೆ ಪರಿಶೀಲನೆ ನಡೆಸುತ್ತಿದ್ದ ವೇಳೆ ಹೆಬ್ಬಾವು ಸದ್ದಿಲ್ಲದ್ದೆ ಆರಾಮವಾಗಿ ಮಲಗಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಉರಗ ರಕ್ಷಕ ದಿನೇಶ್ ಎಂಬವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ದಿನೇಶ್ ಹೆಬ್ಬಾವನ್ನು ಹಿಡಿದು, ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.

