ಬೆಳ್ತಂಗಡಿ : ಮನೆ ಸಮೀಪದಲ್ಲೇ ಕಾಡಾನೆ ಠಿಕಾಣಿ – ಮನೆಮಂದಿಗೆ ಆತಂಕ

ಮಲವಂತಿಗೆ, ಜ. 19 : ಮಲವಂತಿಗೆ ಗ್ರಾಮದ ದಿಡುಪೆಯಲ್ಲಿ ರವಿವಾರ ಸಂಜೆಯ ವೇಳೆಗೆ ಮನೆಯೊಂದರ ಸಮೀಪದಲ್ಲೇ ಆನೆಯೊಂದು ಠಿಕಾಣಿ ಹೂಡಿ ಮನೆಮಂದಿಯನ್ನು ಆತಂಕಕ್ಕೀಡು ಮಾಡಿದೆ. ದಿಡುಪೆಯ ರುಕ್ಮಯ್ಯ ಗೌಡ ಅವರ ಮನೆ ಸಮೀಪ ರವಿವಾರ ಸಂಜೆ 6ರ ಸುಮಾರಿಗೆ ಕಾಡಾನೆ ಕಂಡು ಬಂದಿದ್ದು ಪಟಾಕಿ ಸಿಡಿಸಿ ಆನೆಯನ್ನು ಓಡಿಸಲು ಪ್ರಯತ್ನಪಟ್ಟರೂ ಅದು ಕದಲದೆ ಅಲ್ಲೇ ನಿಂತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Advertisement

ಜ. 17ರ ರಾತ್ರಿ ಕಾಡಾನೆ ದಿಡುಪೆಯ ಜನತಾ ಕಾಲನಿ, ಪೇಟೆ ಪರಿಸರ ಸೇರಿದಂತೆ ಹಲವೆಡೆ ಜನನಿಬಿಡ ಪ್ರದೇಶಗಳಲ್ಲೇ ಸಂಚರಿಸಿದೆ ಎನ್ನಲಾಗಿದೆ. ಅಲ್ಲದೆ, ತಾಲೂಕಿನ ಹಲವು ಭಾಗಗಳಲ್ಲಿ ಕಾಡಾನೆ ಸಂಚಾರ ಕಂಡು ಬಂದಿದೆ. ಜೊತೆಯಲ್ಲಿ ಚಿರತೆಯ ಹಾವಳಿಯೂ ಹೆಚ್ಚಾಗಿದ್ದು, ಜನತೆ ಆತಂಕ ಪಡುವಂತಾಗಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : ಶಿವಮೊಗ್ಗದಿಂದ ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟಕ್ಕೆ ಯತ್ನ – ಮೂವರ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮಾ. 4ರಿಂದ ಉರುವಾಲುಪದವು ಶಿವಾಜಿನಗರದ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವ – ಹರೀಶ್ ಪೂಂಜಾ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

⚠️ Contents are protected on this website.