ಮೊಗ್ರು, ಡಿ.20 : ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮ ಮುಗೇರಡ್ಕ -ಬಜತ್ತೂರು -ಬೆದ್ರೋಡಿ ನಡುವೆ ಸಂಪರ್ಕಕ್ಕೆ ಮುಗೇರಡ್ಕದಲ್ಲಿ ಮುಳುಗು ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.
ಮಣ್ಣು, ಚರಲು ಹಾಕಿ ತಾತ್ಕಾಲಿಕವಾಗಿ ರಸ್ತೆ ರಿಪೇರಿ ಮಾಡಲಾಗಿದೆ. ಶಾಸಕ ಹರೀಶ್ ಪೂಂಜಾರವರ ಹಲವಾರು ವರ್ಷದ ಕನಸಿನ ಮಹತ್ವಕಾಂಕ್ಷಿ ಯೋಜನೆಯಾದ ಏತ ನೀರಾವರಿ ಯೋಜನೆಯ ಗುತ್ತಿಗೆದಾರರು ಆಗಿರುವ ಗ್ರೋಮಾ ಇನ್ಫ್ರಾಸ್ಟ್ರಷ್ಕ್ಚರ್ ಪ್ರೈವೇಟ್ ಲಿಮಿಟೆಡ್ ಇವರು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.
ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಂಗಾಧರ ಪೂಜಾರಿ ಇವರು ಸಹಕರಿಸಿದರು.


