ಮೈಸೂರು : ಶ್ರೀ ಗಣೇಶ ಭಜನಾ ಮಂದಿರ (ರಿ.), ಕುಪ್ಪೆಟ್ಟಿ ಇಲ್ಲಿನ ನೂತನ ರಾಜಗೋಪುರ ಲೋಕಾರ್ಪಣೆ – ಅತಿಥಿಯಾಗಿ ಮೈಸೂರು ಮಹಾರಾಜರಿಗೆ ಆಹ್ವಾನ

ಮೈಸೂರು : ಶ್ರೀ ಗಣೇಶ ಭಜನಾ ಮಂದಿರ (ರಿ.), ಕುಪ್ಪೆಟ್ಟಿ ಇಲ್ಲಿನ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾಗಣೇಶ ಸಭಾಭವನದ ಲೋಕಾರ್ಪಣೆ, ಅಥರ್ವ ಶೀರ್ಷ ಗಣಯಾಗ ಹಾಗೂ ಮಹಾಚಂಡಿಕಾ ಯಾಗವು ಡಿಸೆಂಬರ್ 06, 07 ಹಾಗೂ 08ರಂದು ವೈಭವದಿಂದ ನಡೆಯಲಿದೆ. ಈ ಹಿನ್ನಲೆಯಲ್ಲಿ ಇಂದು ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಹಾರಾಜರನ್ನು ಭಜನಾ ಮಂದಿರದ ಆಡಳಿತ ಮಂಡಳಿಯವರು ಭೇಟಿ ಮಾಡಿ, ಆಮಂತ್ರಣ ಪತ್ರ ನೀಡಿ, ಆಹ್ವಾನಿಸಲಾಯಿತು.

Advertisement

ಡಿಸೆಂಬರ್ 07ರಂದು ಸಂಜೆ ಗಂಟೆ 04:00ರಿಂದ ಜಿಲ್ಲೆಯ ಪ್ರತಿಷ್ಠಿತ ಕಲಾ ತಂಡಗಳಿಂದ ಡೊಳ್ಳು ಕುಣಿತ, ವೀರಗಾಸೆ, ಪಿಲಿನಲಿಕೆ, ಕೌಡಲ ತೈಯ್ಯಂ, ಟ್ಯಾಬ್ಲೋ, ಚೆಂಡೆ, ವಾಲಗ, ಕೊಂಬು ಹಾಗೂ ಭಜನಾ ತಂಡಗಳೊಂದಿಗೆ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಹಾರಾಜರು, ಮಹಾಸಂಸ್ಥಾನಮ್ ಅವರನ್ನು ಯತಿವರ್ಯರೊಂದಿಗೆ ಮಂತ್ರಘೋಷ, ಪೂರ್ಣಕುಂಭ ಸ್ವಾಗತದೊಂದಿಗೆ ವೈಭವದ ಮೆರವಣಿಗೆ ನಡೆಯಲಿದೆ. ಸಂಜೆ 05:30 ಗಂಟೆಗೆ ನೂತನ ರಾಜಗೋಪುರದ ಲೋಕಾರ್ಪಣೆ, ಶ್ರೀ ದುರ್ಗಾ ಗಣಪತಿ ಸಭಾಭವನ ಲೋಕಾರ್ಪಣೆಗೊಳ್ಳಲಿದೆ. ಸಂಜೆ 06:00 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.

Advertisement
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಕರಾವಳಿ, ಟಾಪ್ ಸುದ್ದಿಗಳು

ಉಡುಪಿ : ಕಾಂಗ್ರೆಸ್ ಮುಖಂಡ ಡೇವಿಡ್ ಶೂಟೌಟ್ ಪ್ರಕರಣ – ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಪುತ್ತೂರು, ಬೆಳ್ತಂಗಡಿ, ಸುಳ್ಯ  ಕಡಬ  ತಾಲೂಕಿನ ಎಲ್ಲಾ ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ರಜೆ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಸಾಲ ವಸೂಲಿಗೆ ಆರ್‌ಬಿಐ ಹೊಸ ರೂಲ್ಸ್ – ರಿಕವರಿ ಏಜೆಂಟ್‌ಗಳು ಬೇಕಾಬಿಟ್ಟಿ ಸಾಲಗಾರರ ಮನೆಗೆ ಬರುವಂತಿಲ್ಲ !

⚠️ Contents are protected on this website.