ಲಕ್ನೋ, ಜೂ. 16 : ಬರೋಬ್ಬರಿ 1.12 ಲಕ್ಷ ರೂ ವಿದ್ಯುತ್ ಬಿಲ್ ಬಾಕಿ ಇದ್ದು, ಅದಕ್ಕಾಗಿ ವಿದ್ಯುತ್ ಇಲಾಖೆ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ನೊಂದು ಉತ್ತರ ಪ್ರದೇಶದ ಗಾಜಿಪುರದಲ್ಲಿ 55 ವರ್ಷದ ಪಾನ್ ಅಂಗಡಿ ಮಾಲೀಕ ಸೋಮವಾರ ವಿಷಕಾರಿ ವಸ್ತು ಸೇವಿಸಿ ಸೋಮವಾರ (ಜೂ.15) ಸಾವನ್ನಪ್ಪಿದ್ದಾರೆ. ವಿದ್ಯುತ್ ಇಲಾಖೆ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಅವರ ಕುಟುಂಬ ಆರೋಪಿಸಿದೆ.
ಸಂತ್ರಸ್ಥ ಸುರೇಂದ್ರ ಕಶ್ಯಪ್ ಸೋಮವಾರ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಂತರ ಆಸ್ಪತ್ರೆಯಲ್ಲಿ ನಿಧನರಾದರು. ವಿದ್ಯುತ್ ಬಿಲ್ ಬಾಕಿ ಸಂಬಂಧಿಸಿದ ಪದೇ ಪದೇ ಕಿರುಕುಳಕ್ಕೆ ಒಳಗಾಗಿದ್ದರು ಎಂದು ಅವರ ಕುಟುಂಬ ಹೇಳಿಕೊಂಡಿದೆ, ಇದು ಅಂತಿಮವಾಗಿ ಅವರನ್ನು ಈ ನಿರ್ಧಾರ ಕೈಗೊಳ್ಳಲು ಪ್ರೇರೇಪಿಸಿತು ಎಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸಂಪೂರ್ಣ ತನಿಖೆ ನಡೆಸಲಾಗುವುದು ಮತ್ತು ಕಿರುಕುಳಕ್ಕೆ ಕಾರಣರಾದ ಯಾರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಮೃತರ ಕುಟುಂಬವು ಹೇಳಿದರು.
ಮುರಡಚಕ್ ಗ್ರಾಮದ ನಿವಾಸಿ ಸುರೇಂದ್ರ ಅವರು ಸೈಪುರದಲ್ಲಿ ಸಣ್ಣ ಪಾನ್ ಅಂಗಡಿ ನಡೆಸುತ್ತಿದ್ದರು.
ಅವರ ಪತ್ನಿ ಜ್ಞಾನಿ ದೇವಿ, ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳು ಅಗಲಿದ್ದಾರೆ. ಅವರ ಹಿರಿಯ ಮಗ ಸೂರಜ್ (33) ವಾರಣಾಸಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರೆ, ಕಿರಿಯ ಮಗ ಶುಭಂ ಮುಂಬೈನಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದಾರೆ. ಒಬ್ಬ ಮಗಳು ಅಂಜಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಹೆಸರಿನಲ್ಲಿ 1.12 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಇರುವುದು ಮಾರ್ಚ್ನಲ್ಲಿ ಪತ್ತೆಯಾಗಿತ್ತು ಎಂದು ಅಂಜಲಿ ಹೇಳಿದರು.
“ವಿದ್ಯುತ್ ಇಲಾಖೆ ಅಧಿಕಾರಿಗಳು ನಮ್ಮ ಮೀಟರ್ ಅನ್ನು ಎರಡು ಬಾರಿ ಬದಲಾಯಿಸಿದ ನಂತರ ಬಾಕಿ ಮೊತ್ತ ಸಂಗ್ರಹವಾಗಿದೆ, ಮತ್ತು ನಾವು ಪಾವತಿ ಮಾಡಲು ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿಕೊಂಡರು.
ಇದು ಗಣನೀಯ ಮೊತ್ತವಾದ್ದರಿಂದ, ಕುಟುಂಬಕ್ಕೆ ಹಣ ಹೊಂದಿಸಲು ಸಮಯ ಬೇಕಾಗುತ್ತದೆ ಎಂದು ಅವರು ಹೇಳಿದರು. “ನಾವು ಹಾಗೆ ಮಾಡುವ ಮೊದಲು, ಇಲಾಖೆಯು ರಿಕವರಿ ಪ್ರಮಾಣಪತ್ರ (ಆರ್ಸಿ) ನೀಡಿತು, ಮತ್ತು ಒಬ್ಬ ಆಮೀನ್ (ಆದಾಯ ವಸೂಲಾತಿ ಅಧಿಕಾರಿ) ನಮ್ಮ ಮನೆಗೆ ನಿಯಮಿತವಾಗಿ ಭೇಟಿ ನೀಡಲು ಪ್ರಾರಂಭಿಸಿದರು, ಬಾಕಿ ಮೊತ್ತವನ್ನು ಪಾವತಿಸದಿದ್ದರೆ ನಮ್ಮ ಮನೆ ಮತ್ತು ನನ್ನ ತಂದೆಯ ಪಾನ್ ಅಂಗಡಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಎಚ್ಚರಿಸಿದ್ದರು” ಎಂದರು.


