ಕಾರ್ಕಳ, ಜ. 08 : ಆಕಸ್ಮಿಕವಾಗಿ ಬಾವಿಗೆ ಬಿದ್ದ ವ್ಯಕ್ತಿಯೋರ್ವರನ್ನು ಅಗ್ನಿ ಶಾಮಕ ದಳ ರಕ್ಷಿಸಿದ ಘಟನೆ ಕುಕ್ಕುಂದೂರು ಗ್ರಾಮದಲ್ಲಿ ನಡೆದಿದೆ.

ಕುಕ್ಕುಂದೂರು ಗ್ರಾಮದ ನಕ್ರೆ ದೇವರ ಗುಡ್ಡೆ ನಿವಾಸಿ ಚಂದು ಪರವ (70) ರಕ್ಷಣೆಗೊಳಗದವರು ಎಂದು ತಿಳಿದು ಬಂದಿದೆ.
ರಕ್ಷಿಸಲ್ಪಟ್ಟ ವ್ಯಕ್ತಿ ಪ್ಯಾರಲಿಸ್ ಎಂಬ ಕಾಯಿಲೆಯಿಂದ ಬಳಳುತ್ತಿದ್ದರು ಎಂದು ತಿಳಿದು ಬಂದಿದೆ. ಕೈ ಕಾಲು ಬಲ ವಿಲ್ಲದೆ 30ಆಡಿ ಬಾವಿಗೆ ಆಕಸ್ಮಿಕವಾಗಿ ಬಿದ್ದರು. ಮಾಹಿತಿ ತಿಳಿದ ತಕ್ಷಣ ಕಾರ್ಕಳ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.
ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ಚಂದಶೇಖರ್ ನೇತೃತ್ವದಲ್ಲಿ, ಹರಿಪ್ರಸಾದ್, ಮುಜಂಬಿಲ್, ದಿನೇಶ್ ಗಣೇಶ್ ಪಾಲ್ಗೊಡ್ಡಿದರು.


