ಕಾರ್ಕಳ, ಮಾ. 19 : ನಾಲ್ಕು ವರುಷಗಳ ಬಳಿಕ ತುಳು ರಂಗಭೂಮಿಗೆ ಬಲೆ ತೆಲಿಪಾಲೆ, ಮಜಾಭಾರತ, V4 ಕಾಮಿಡಿ ಪ್ರಿಮಿಯರ್ ಲೀಗ್ ಚಾಂಪಿಯನ್ ಖ್ಯಾತಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಚಲನಚಿತ್ರ ನಟ, ತೆಲಿಕೆದ ತೆನಾಲಿ ಸುನಿಲ್ ನೆಲ್ಲಿಗುಡ್ಡೆ ನೇತೃತ್ವದ “ತೆಲಿಕೆದ ತೆನಾಲಿ” ತಂಡ ಕಾರ್ಕಳ ಇವರ ಹೊಸ ಕಲಾ ಕಾಣಿಕೆಯ ಶೀರ್ಷಿಕೆ ಯುಗಾದಿ ದಿನದಂದು ಬಿಡುಗಡೆಗೊಂಡಿದೆ.

“ತೆಲಿಕೆದ ತಾಲಿ” ತಂಡ ಕಾರ್ಕಳ ಅಭಿನಯದ ತುಳು “ರಾಯರುಲ್ಲೆರ್” ಹಾಗೂ ಕನ್ನಡ “ರಾಯರಿದ್ದಾರೆ” ಎಂಬ ಭಕ್ತಿ ಪ್ರಧಾನ ತುಳು ಸಾಂಸಾರಿಕ ಹಾಸ್ಯಮಯ ನಾಟಕ ‘ಗುರುರಾಯರ ಭಕ್ತಿ ಪವಾಡದ ಚಿತ್ರಣ’ ಆಗಸ್ಟ್ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ ಎಂದು ತೆಲಿಕೆದ ತೆನಾಲಿ ಸುನಿಲ್ ನೆಲ್ಲಿಗುಡ್ಡೆ ಮಾಹಿತಿ ನೀಡಿದ್ದಾರೆ.
ಪ್ರದರ್ಶನಕ್ಕಾಗಿ ಸಂಪರ್ಕಿಸಿ : 9845439720


