ಬೆಳ್ತಂಗಡಿ : ಕನ್ಯಾಡಿಯ ಸೇವಾಭಾರತಿ ಎಂಬ ಸಂಸ್ಥೆಯು ಸರಕಾರೇತರ ಸಂಸ್ಥೆಯಾಗಿದ್ದುಕೊಂದು ಸೇವೆ ಎಂಬ ಯಜ್ಞದಲ್ಲಿ ಕಳೆದ 21 ವರ್ಷಗಳಿಂದ ತನ್ನನ್ನು ತಾನು ತೊಡಗಿಸಿಕೊಂಡಿದೆ. ತಾಲೂಕಿನಲ್ಲೇ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಈ ಸಂಸ್ಥೆಯು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಇದೀಗ ಸೇವಾ ಭಾರತಿ ಸಂಸ್ಥೆಯ ವತಿಯಿಂದ ದೀಪಾವಳಿ ಸ್ನೇಹ ಮಿಲನ್ ಕಾರ್ಯಕ್ರಮವು ನವೆಂಬರ್ 9ನೇ ಆದಿತ್ಯವಾರದಂದು ಉಜಿರೆಯ ಶಾರದಾ ಮಂಟಪದಲ್ಲಿ ಸಂಜೆ 6:30ಕ್ಕೆ ನಡೆಯಲಿದೆ ಎಂದು ಸೇವಾಭಾರತಿ ಸಂಸ್ಥಾಪಕರಾದ ಶ್ರೀ ವಿನಾಯಕ್ ರಾವ್ ಮಾಹಿತಿ ನೀಡಿದ್ದಾರೆ.
ಕನ್ಯಾಡಿಯಲ್ಲಿ ಸ್ವಂತ ಜಾಗದಲ್ಲಿ ಕಟ್ಟಡ ಹೊಂದುವ ಕನಸನ್ನು ಸೇವಾಭಾರತಿ ನನಸು ಮಾಡಿಕೊಳ್ಳುವ ದಿನಗಳು ಹತ್ತಿರ ಬರುತ್ತಿವೆ. ಈ ನಿಟ್ಟಿನಲ್ಲಿ ನೂತನ ಕಟ್ಟಡದ ನೆಲಮಹಡಿಗೆ ಪ್ರಸ್ತುತವಿರುವ ಕಾರ್ಯಾಲಯ ಸೇವಾನಿಕೇತನವು ಸ್ಥಳಾಂತರಗೊಂಡು ಇನ್ನಷ್ಟು ಸಮಾಜಮುಖಿಯತ್ತ ದೃಷ್ಟಿ ಹಾಯಿಸಲಿದೆ. ಸಂಘಕ್ಕೆ 100ನೇ ವರ್ಷದ ಸಂಭ್ರಮಾಚರಣೆಯ ಶುಭಪರ್ವದಲ್ಲಿ ಈ ನೂತನ ಕಟ್ಟಡದಲ್ಲಿ ಕಾರ್ಯಾಲಯವು ಶುಭಾರಂಭಗೊಳ್ಳುವುದು ನಮಗೆಲ್ಲರಿಗೂ ಅಭಿಮಾನದ ಸಂಗತಿ. ಈ ನಿಟ್ಟಿನಲ್ಲಿ ನಮ್ಮ ಸೇವಾ ಕಾರ್ಯಕ್ಕೆ ಇನ್ನಷ್ಟು ವೇಗ ಕೊಡುವ ನಿಮಿತ್ತ ತಾಲೂಕಿನ ಹಿರಿಯ ಕಾರ್ಯಕರ್ತರು, ಸ್ವಯಂಸೇವಕರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರನ್ನು ಸೇರಿಸಿ ದೀಪಾವಳಿ ಸ್ನೇಹ ಮಿಲನ್ ನಡೆಯಲಿದೆ ಎಂದರು.

