ಮಂಗಳೂರು, ಫೆ. 14 : ಶ್ರೀ ಕ್ಷೇತ್ರ ಅರ್ಕುಳಕ್ಕೆ ನೂತನ ಅಶ್ವ ಬಂಡಿಯು ಫೆ. 15ರಂದು ಸಂಜೆ 04 ಗಂಟೆಗೆ ಭವ್ಯ ಶೋಭಾಯಾತ್ರೆಯ ಮೂಲಕ ಸಮರ್ಪಣೆಯಾಗಲಿದೆ.
ಕಡೆಗೋಳಿ, ಸೇವಾಂಜಲಿ, ಅರ್ಕುಳ ದ್ವಾರದ ಮೂಲಕ ಶ್ರೀ ಕ್ಷೇತ್ರ ಅರ್ಕುಳಕ್ಕೆ ನೂತನ ಅಶ್ವ ಬಂಡಿ ಸಮರ್ಪಣಾ ಶೋಭಾಯಾತ್ರೆಯು ಸಾಗಿ ಬರಲಿದೆ. ಈ ಅಶ್ವ ಬಂಡಿ ಸಮರ್ಪಣಾ ಶೋಭಾಯಾತ್ರೆಯಲ್ಲಿ ಎಲ್ಲಾ ಭಗವದ್ಭಕ್ತರು, ಸಂಘ ಸಂಸ್ಥೆಗಳು ಪಾಲ್ಗೊಳ್ಳಬೇಕೆಂದು ಅರ್ಕುಳ ಬೀಡು ವಜ್ರನಾಭ ಶೆಟ್ಟಿ ವಿನಂತಿಸಿಕೊಂಡಿದ್ದಾರೆ.

