ಕಾಸರಗೋಡು : ಮನೆಯೊಳಗಡೆ ಹಾವು ಪತ್ತೆ – ಅಚ್ಚರಿಗೆ ಕಾರಣವಾಯಿತು ಹಾವಿನ ದೇಹದಲ್ಲಿನ ಚಿನ್ನದ ಉಂಗುರ !!

ಮುಳ್ಳೇರಿಯ, ಮೇ. 02 : ಮನೆಯ ಮೇಜಿನೊಳಗೆ ಪತ್ತೆಯಾದ ಹಾವಿನ ದೇಹದಲ್ಲಿ ಚಿನ್ನದ ಉಂಗುರ ಕಂಡು ಬಂದಿದ್ದು, ಅಚ್ಚರಿಗೆ ಕಾರಣವಾಗಿದೆ.

ಮುಳ್ಳೇರಿಯದ ಪದಿಕ್ಕಾಲ್ ನಿವಾಸಿ ರವಿ ಅವರ ಮನೆಯಲ್ಲಿದ್ದ ಮರದ ಮೇಜಿನೊಳಗೆ ಬುಧವಾರ ಹಾವೊಂದು ನುಸುಳಿತ್ತು. ಮಕ್ಕಳು ಮೇಜು ತೆರೆಯಲೆತ್ನಿಸಿದಾಗ ಹಾವು ಕಂಡು ಬಂದಿದ್ದು, ಹಿರಿಯರಿಗೆ ತಿಳಿಸಿದ್ದಾರೆ. ಮನೆಯವರು ಕೂಡಲೇ ಫಾರೆಸ್ಟರ್ ಕೃಷ್ಣನ್ ಅವರಿಗೆ ವಿಷಯ ತಿಳಿಸಿದರು. ಕೃಷ್ಣನ್ ಬಂದು ಪರಿಶೀಲಿಸಿ, ಹಾವು ರಕ್ಷಕರಾದ ಪಾಂಡಿಯ ಅನಿಲ್ ಹಾಗೂ ಏವಂದೂರಿನ ಮಹೇಶ್‌ಗೆ ಮಾಹಿತಿ ನೀಡಿದರು. ಅವರು ಬಂದು ನೋಡಿದಾಗ ಅದು ಕೇರೆ ಹಾವು ಎಂದು ತಿಳಿಯಿತು. ಆದರೆ ಅದರ ದೇಹದಲ್ಲಿ ಚಿನ್ನದ ಉಂಗುರ ಸಿಕ್ಕಿಕೊಂಡಿದ್ದುದು ಅಚ್ಚರಿಗೆ ಕಾರಣವಾಯಿತು.

ಬಳಿಕ ಉಂಗುರವನ್ನು ಕತ್ತರಿಸಿ ತೆಗೆದು ಹಾವನ್ನು ಕಾಡಿಗೆ ಬಿಡಲಾಯಿತು. ಹಾವಿನ ದೇಹದಲ್ಲಿ ಚಿನ್ನದ ಉಂಗುರ ಹೇಗೆ ಸಿಲುಕಿಕೊಂಡಿದೆ ಎಂದು ತಿಳಿದು ಬಂದಿಲ್ಲ. ಹಾವು ಮರಿ ಇರುವಾಗಲೇ ಉಂಗುರ ಸಿಲುಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಚಿನ್ನದ ಉಂಗುರ ಸದ್ಯಕ್ಕೆ ಅರಣ್ಯ ಇಲಾಖೆಯ ಅಧಿಕಾರಿಯ ಸುಪರ್ದಿಯಲ್ಲಿದೆ.

Advertisement
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

⚠️ Contents are protected on this website.