ಕಡಿರುದ್ಯಾವರ, ಜು. 1 : ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಿರುದ್ಯಾವರ ಗ್ರಾಮದ ಮಠದ ಬಳಿ ಜು.1ರಂದು ಮಧ್ಯಾಹ್ನ ನಡೆದಿದೆ.
ಕಡಿರುದ್ಯಾವರ ಗ್ರಾಮದ ಪಾಡಿ ಕಮಲ ಕರುಣಾಕರ ಪೂಜಾರಿ ರವರ ಪುತ್ರಿ ನಿಖಿತಾ(19ವ) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಎಂತಹ ಕಷ್ಟ ಅಥವಾ ನೋವಿನ ಸಮಯವಾದರೂ ಅದು ಕಳೆದುಹೋಗುತ್ತದೆ. ದುಡುಕಿ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ, ತಾಳ್ಮೆಯಿಂದ ನಿರ್ಧಾರ ಕೈಗೊಳ್ಳುವುದು ಒಳಿತು. ಆತ್ಮಹತ್ಯೆಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ, ಮನೆ ಮಂದಿಯನ್ನು ಅನಾಥರನ್ನಾಗಿಸುತ್ತೇವೆ. ಸಮಸ್ಯೆಗಳ ಬಗ್ಗೆ ಸೂಕ್ತ ಸಲಹೆಗಳಿಗಾಗಿ ತಮ್ಮದೇ ಸ್ನೇಹಿತರನ್ನು ಅಥವಾ ವೈದ್ಯರನ್ನು ಭೇಟಿಯಾಗಿ.


