ಕಾರ್ಕಳ, ಮಾ. 17 : ಮಜಾ ಭಾರತ, ಬಲೆ ತೆಲಿಪಾಲೆ, V4 ಕಾಮಿಡಿ ಪ್ರೀಮಿಯರ್ ಲೀಗ್ ಚಾಂಪಿಯನ್ ಪ್ರಶಸ್ತಿ ವಿಜೇತ ತ೦ಡ ತೆಲಿಕೆದ ತೆನಾಲಿ ಚಲನಚಿತ್ರ ನಟ ಸುನಿಲ್ ನೆಲ್ಲಿಗುಡ್ಡೆ ನೇತೃತ್ವದ “ತೆಲಿಕೆದ ತೆನಾಲಿ” ತಂಡ ಕಾರ್ಕಳ ಇವರಿಂದ 4 ವರುಷಗಳ ನಂತರ ರ೦ಗಭೂಮಿಗೆ ಹೊಸವರುಷ ಯುಗಾದಿಯಂದು ಹೊಸ ಕಲಾ ಕಾಣಿಕೆ ನಡೆಯಲಿದೆ.
ಹಿಂದೂ ಪರ್ವ ಹೊಸವರುಷ ಯುಗಾದಿಯಂದು ತುಳು ಹಾಗೂ ಕನ್ನಡ ನಾಟಕದ ಶೀರ್ಷಿಕೆ ಬಿಡುಗಡೆಯಾಗಲಿದ್ದು, ಆಗಸ್ಟ್ ನಲ್ಲಿ ಪ್ರಥಮ ಪ್ರದರ್ಶನವು ನಡೆಯಲಿದೆ ಎಂದು “ತೆಲಿಕೆದ ತೆನಾಲಿ” ತಂಡ ಕಾರ್ಕಳ ತಂಡದ ನಟ ಸುನಿಲ್ ನೆಲ್ಲಿಗುಡ್ಡೆ ಮಾಹಿತಿ ನೀಡಿದ್ದಾರೆ.

