ತುಮಕೂರು, ಜೂ. 5 : ಉಗ್ರರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದ ನಗರದ ಶಂಕಿತ ಉಗ್ರನೋರ್ವನನ್ನು ತುಮಕೂರು ಪೊಲೀಸರು ನಗರದಲ್ಲಿ ಬಂಧಿಸಿದ್ದಾರೆ.
ಇಲ್ಲಿಯ ಬೀಡಿ ಬಡಾವಣೆಯ ನಿವಾಸಿ ಜಮೀರ್ ಖಾನ್ (22) ಬಂಧಿತನಾಗಿದ್ದು, ಈತನನ್ನು ಶುಕ್ರವಾರ (ಜೂ.05) ಬೆಳಿಗ್ಗೆ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಮುಂಬಯಿ ಉದ್ಯಮಿಯೋರ್ವರ ಕೊಲೆಗೆ ಸಂಚು ರೂಪಿಸಿದ ಶಂಕೆ ಮೇರೆಗೆ ತುಮಕೂರು ಪೊಲೀಸರು ಅಲ್ಲಿಯ ಅಲ್ಲಾಭಕ್ಷ ಎಂಬಾತನನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಆತನ ಮಾಹಿತಿ ಮೇರೆಗೆ ನಗರಕ್ಕೆ ಬಂದು ಜಮೀರ್ ಖಾನ್ನನ್ನು ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ.
ಜಮೀರ್ ಖಾನ್ ಫೇಸ್ಟುಕ್, ಇನ್ಸಾಗ್ರಾಂ ಸೇರಿದಂತೆ ಬೇರೆ ಬೇರೆ ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರರ ಸಂಪರ್ಕದಲ್ಲಿದ್ದನು ಹಾಗೂ ದೇಶದಲ್ಲಿ ಭಯೋತ್ಪಾದಕ ಸಂಚು ರೂಪಿಸುವಲ್ಲಿ ಕೈಜೋಡಿಸಿದ್ದ ಎನ್ನಲಾಗಿದೆ. ಆತ ಯಾವೆಲ್ಲ ಕುಕೃತ್ಯದಲ್ಲಿ ಕೈಜೋಡಿಸಿದ್ದನು, ಏನೆಲ್ಲಾ ಸಂಚು ರೂಪಿಸಿಕೊಂಡಿದ್ದ ಎಂಬುದು ತನಿಖೆಯಿಂದಲೇ ಹೊರಬೀಳಬೇಕಿದೆ.
ಜಮೀರ್ ಖಾನ್ ಬಂಧನದ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ಶೇಖರ್ ಎಚ್.ಟಿ, ಯುವಕನೋರ್ವನನ್ನು ತುಮಕೂರು ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿರುವ ಅವರಿಂದಲೇ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ ಎಂದರು.


