ಕುಂದಾಪುರ : ವನಿತೆಯರ ಅಂಡರ್-19 ದೇಶಿ ಕರ್ನಾಟಕ ತಂಡದ ನಾಯಕಿಯಾಗಿ ಕುಂದಾಪುರದ ರಚಿತಾ ಹತ್ವಾರ್

ಕುಂದಾಪುರ, ಡಿ. 06 : ವನಿತೆಯರ ಅಂಡರ್-19 ದೇಶಿ ಏಕದಿನ ಕ್ರಿಕೆಟ್ ಪಂದ್ಯಾವಳಿಯ ಕರ್ನಾಟಕ ತಂಡದ ನಾಯಕಿಯಾಗಿ ಕುಂದಾಪುರದ ರಚಿತಾ ಹತ್ವಾರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಬಿಸಿಸಿಐ ವತಿಯಿಂದ ಡಿ. 13ರಿಂದ 21ರ ವರೆಗೆ ವನಿತೆಯರ ಅಂಡರ್-19 ದೇಶಿ ಏಕದಿನ ಕ್ರಿಕೆಟ್ ಪಂದ್ಯಾಟ ಹೈದರಾಬಾದಿನಲ್ಲಿ ನಡೆಯಲಿದೆ.

Advertisement

ಕುಂದಾಪುರದ ರಚಿತಾ ಹತ್ವಾರ್ ರಾಜ್ಯ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು. 16 ವರ್ಷದ ರಚಿತಾ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ನಿಭಾಯಿಸಲಿದ್ದಾರೆ. ಕಶ್ಚಿ ಕಂಡಿಕುಪ್ಪ ಉಪ ನಾಯಕಿ, ಶ್ರೇಯಾ ಸಿ. ಎರಡನೇ ಕೀಪರ್‌ ಆಗಿದ್ದಾರೆ. ರಚಿತಾ ಅವರು ಪ್ರಸಕ್ತ ಸಾಗುತ್ತಿರುವ ಅಂಡರ್-23 ದೇಶಿ ಟಿ20 ಟೂರ್ನಿಯಲ್ಲಿ ಕರ್ನಾಟಕ ಪರ ಆಡುತ್ತಿದ್ದು, ಆರಂಭಿಕ ಆಟಗಾರ್ತಿಯಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಚಿತಾ ಕರ್ನಾಟಕ ಹಿರಿಯರ ತಂಡದ ಸಂಭಾವ್ಯ ಆಟಗಾರ್ತಿಯರ ಯಾದಿಯಲ್ಲೂ ಸ್ಥಾನ ಪಡೆದಿದ್ದು, ಮುಖ್ಯ ತಂಡಕ್ಕೂ ಆಯ್ಕೆಯಾಗುವ ನಿರೀಕ್ಷೆ ಮೂಡಿಸಿದ್ದಾರೆ. ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕ್ರಿಕೆಟ್ ಅಕಾಡೆಮಿಯ ಮುಖ್ಯ ಕೋಚ್ ಇರ್ಫಾನ್ ಸೇಟ್ ಇವರಿಗೆ ತರಬೇತಿ ನೀಡುತ್ತಿದ್ದಾರೆ.

ಅಂಡರ್-19 ಕರ್ನಾಟಕ ತಂಡ: ರಚಿತಾ ಹತ್ವಾರ್(ನಾಯಕಿ, ವಿ.ಕೀ.), ಕಶ್ಚಿ ಕಂಡಿಕುಪ್ಪ (ಉಪ ನಾಯಕಿ), ಲಿಯಾಂಕಾ ಶೆಟ್ಟಿ, ಶ್ರೇಯಾ ಸಿ. (ವಿ.ಕೀ.), ಕರ್ಣಿಕಾ ಕಾರ್ತಿಕ್, ದೀಕ್ಷಾ ಜಿ. ಹೊನ್ನುಶ್ರೀ, ಶ್ರೀನಿತಿ ಪಿ. ರೈ, ದೀಕ್ಷಾ ಸಿ.ಡಿ., ವಂದಿತಾ ಕೆ. ರಾವ್, ನಂದಿನಿ ಚೌಹಾಣ್, ವೇದವರ್ಷಿಣಿ, ಹರಿಣಿ ಎನ್., ರಿಮ್ಮಿಂ ಶುಕ್ಲಾ, ಅಫಿನ್ ರುಹಿ ಕೆ. ದೊಡ್ಡಮನಿ, ಜೋಯಾ ಇಮಿಂಯಾಜ್ ಖಾಜಿ, ಲಾವಣ್ಯ ಚಲನ್. ಕೋಚ್: ರಾಖೀ ಗಂಗಲ್, ರೂಪಾ ಬಿ.ಎನ್.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.