ಉಪ್ಪಿನಂಗಡಿ : ನೇತ್ರಾವತಿ-ಕುಮಾರಧಾರ ನದಿಗಳ ಸಂಗಮದಲ್ಲಿರುವ ಶ್ರೀ ಸಹಸ್ರಲಿಂಗೇಶ್ವರ ದೇವರ ಉದ್ಭವ ಲಿಂಗದ ದರ್ಶನ ಭಾಗ್ಯ ಬರೋಬ್ಬರಿ 800 ದಿನಗಳ ಬಳಿಕ ಭಕ್ತರಿಗೆ ಪ್ರಾಪ್ತವಾಗಿದೆ.


ನದಿಯ ಮಧ್ಯಭಾಗದಲ್ಲಿರುವ ಉದ್ಭವ ಲಿಂಗದ ಮೇಲೆ ಮರಳು ಹಾಗೂ ನೀರು ತುಂಬಿ ಸುಮಾರು 800 ದಿನಗಳೇ ಕಳೆದು ಹೋಗಿತ್ತು. ಶ್ರೀ ಸಹಸ್ರಲಿಂಗೇಶ್ವರ ದೇವರ ಉದ್ಭವ ಲಿಂಗದ ದರುಶನಕ್ಕಾಗಿ ಭಕ್ತಗಣ ಕಾದು ಕುಳಿತ್ತಿತ್ತು. ಇದೀಗ ಚಾರ್ ಧಾಮ್ ಯಾತ್ರಾ ಸಂಘದ ಸದಸ್ಯರು, ಟೀಮ್ ಅಘೋರ ಉಪ್ಪಿನಂಗಡಿ ಹಾಗೂ ಟೀಮ್ ದಕ್ಷಿಣಕಾಶಿಯ ಯುವ ಸದಸ್ಯರ ನೇತೃತ್ವದದಲ್ಲಿ, ಶ್ರಮದಾನದ ಮೂಲಕ ಉದ್ಭವ ಲಿಂಗದ ಮರಳು ಹಾಗೂ ನೀರನ್ನು ತೆಗೆಯುವ ಕಾರ್ಯವನ್ನು ನಡೆಸಲಾಗಿದೆ. ಯುವಕರ ಪ್ರಯತ್ನದಿಂಗ ಭಕ್ತರಿಗೆ ಉದ್ಭವ ಲಿಂಗದ ದರ್ಶನ ಭಾಗ್ಯ ದೊರೆತಿದೆ.

