ಕಾರ್ಕಳ, ಫೆ. 06 : ಹಿರ್ಗಾನ ಗ್ರಾಮ, ವಿಠೋಭನಗರದ ಶ್ರೀ ವಿಠೋಭ ರುಕುಮಾಯಿ ಭಜನಾ ಮಂದಿರದ 17ನೇ ವರ್ಷದ ಭಜನಾ ಮಂಗಳೋತ್ಸವವು ಫೆ. 21ನೇ ಶನಿವಾರದಂದು ಭಕ್ತಿ – ರಾಗ – ತಾಳ’ದ ಜೊತೆಯಲ್ಲಿ ಅತ್ಯಂತ ವಿಜ್ರಂಭಣೆಯಿಂದ ಜರುಗಲಿದೆ.

ಫೆ. 20ರ ಶುಕ್ರವಾರ ಬೆಳಿಗ್ಗೆ 8.30 ಗಂಟೆಗೆ – ನಾಗನ ಪೂಜೆ, ಫೆ. ಫೆ. 21ನೇ ಶನಿವಾರದಂದು ಮಧ್ಯಾಹ್ನ 3.00 ಘಂಟೆಗೆ- ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 6.00ರಿಂದ ಭಜನೆ ಪ್ರಾರಂಭಗೊಂಡು ರಾತ್ರಿ 12.00ರವರೆಗೆ ನಡೆಯಲಿದೆ ಮತ್ತು ರಾತ್ರಿ ಗಂಟೆ 8.00ರ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರುವುದು ಎಂದು ಹಿರ್ಗಾನ ವಿಠೋಭನಗರದ ಶ್ರೀ ವಿಠೋಭ ರುಕುಮಾಯಿ ಭಜನಾ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.

