ಕಾರ್ಕಳ, ಡಿ. 31 : ಸಾರ್ವಜನಿಕ ಶ್ರೀ ಭ್ರಾಮರೀ ಅಯ್ಯಪ್ಪ ಭಕ್ತ ವೃಂದ ಮಿಯ್ಯಾರು ಕೊಡಮಣಿತ್ತಾಯ ಗರಡಿ, ಕಾರ್ಕಳ ಆಶ್ರಯದಲ್ಲಿ 13 ನೇ ವರ್ಷದ ಮಹಾಪೂಜೆಯು ಜನವರಿ 04ರ ಆದಿತ್ಯವಾರದಂದು ಶ್ರೀ ಉಮೇಶ್ ಗುರುಸ್ವಾಮಿಯವರ ನೇತೃತ್ವದಲ್ಲಿ ಜರಗಲಿದೆ.
ಬೆಳಿಗ್ಗೆ 7-00ಕ್ಕೆ ಗಣಹೋಮ, 9-00ಕ್ಕೆ ಇರುಮುಡಿ ಕಟ್ಟುವುದು, ಮಧ್ಯಾಹ್ನ 12-30ಕ್ಕೆ ಮಹಾಪೂಜೆ ನಡೆಯಲಿದೆ. ಆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯು ಜರುಗಲಿದೆ. ಆ ಪ್ರಯಕ್ತ ಭಕ್ತಾಭಿಮಾನಿಗಳು ಶ್ರೀ ಅಯ್ಯಪ್ಪ ಸ್ವಾಮಿಯ ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ ಸಂಘಟಕರು ವಿನಂತಿಸಿಕೊಂಡಿದ್ದಾರೆ.

