ಉರುವಾಲು, ಫೆ. 24 : ಶಿವಾಜಿನಗರ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವದಂಗವಾಗಿ ಚಪ್ಪರ ಮುಹೂರ್ತ ಕಾರ್ಯಕ್ರಮವು ದೇವಸ್ಥಾನದಲ್ಲಿ ನಡೆಯಿತು. ಧಾರ್ಮಿಕ ಮುಖಂಡರಾದ ಶ್ರೀ ಕಿರಣ್ ಚಂದ್ರ ಪುಷ್ಪಗಿರಿಯವರು ಚಪ್ಪರ ಮುಹೂರ್ತ ನೆರವೇರಿಸಿದರು.

ಈ ಸಂದರ್ಭದಲ್ಲಿ, ಶ್ರೀ ಮಹಮ್ಮಾಯಿ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವದ ಕಾರ್ಯಾಧ್ಯಕ್ಷರಾದ ಶ್ರೀ ಚೆನ್ನಕೇಶವ ಅರಸರಮಜಲು, ಶ್ರೀ ರಾಘವ ನಾಯ್ಕ ಶ್ರೀ ಜಲದುರ್ಗಾ, ಪ್ರಧಾನ ಕಾರ್ಯದರ್ಶಿ ಶ್ರೀ ಚಿದಾನಂದ ನಾಯ್ಕ ಕುಪ್ಪೆಟ್ಟಿ, ಕೋಶಾಧಿಕಾರಿ ಶ್ರೀ ಪುಷ್ಪಾನಂದ ನಾಯ್ಕ ಗಜಂತೋಡಿ, ಪುನರ್ ಪ್ರತಿಷ್ಠಾ ಸಮಿತಿ ಅಧ್ಯಕ್ಷರಾದ ಶ್ರೀ ವಿನೋದ್ ನಾಯ್ಕ ಶ್ರೀ ಜಲದುರ್ಗಾ, ಶ್ರೀ ಸೀತಾರಾಮ ನಾಯ್ಕ ಅರ್ಬೀ, ಉಪಾಧ್ಯಕ್ಷರಾದ ಶ್ರೀ ರಾಘವನಾಯ್ಕ ಜಲದುರ್ಗಾ, ಕಾರ್ಯದರ್ಶಿಗಳಾದ ಶ್ರೀ ಕಿಶನ್ ನಾಯ್ಕ ಮಜ್ಜೆ, ಶ್ರೀ ಉಮೇಶ ನಾಯ್ಕ ಎಂಜಿರಪಳಿಕೆ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.


