ಕಲ್ಮಂಜ, ಜು. 20 : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಲ್ಮಂಜ ವತಿಯಿಂದ ನಡೆಯುವ 20ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಜು. 19ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಣಯಿಸಿ, ಘೋಷಿಸಲಾಯಿತು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 20ನೇ ವರ್ಷದ ಗಣೇಶೋತ್ಸವದ ನೂತನ ಅಧ್ಯಕ್ಷರಾಗಿ ಶ್ರೀ ಮೋಹನ್ ಗೌಡ ಮೂಡಯಿಬೆಟ್ಟು, ಉಪಾಧ್ಯಕ್ಷರಾಗಿ ಶ್ರೀ ಪ್ರವೀಣ್ ಗೌಡ ಕರಿಯನೆಲ, ಕಾರ್ಯದರ್ಶಿಯಾಗಿ ಶ್ರೀ ಲೋಹಿತ್ ಕುಮಾರ್, ಕೋಶಾಧಿಕಾರಿಗಳಾಗಿ ಶ್ರೀ ಅನಿಲ್ ಹಾಗೂ ಶ್ರೀ ಸಂದೀಪ್ ಎಸ್., ಜೊತೆ ಕಾರ್ಯದರ್ಶಿಗಳಾಗಿ ಶ್ರೀ ನಾಗೇಶ್, ಶ್ರೀ ಸತ್ಯಪ್ರಸಾದ್, ಕ್ರೀಡಾ ಕಾರ್ಯದರ್ಶಿಗಳಾಗಿ ಶ್ರೀ ಮುರಳಿಧರ, ಶ್ರೀ ಸಾಂತಪ್ಪ, ವೇದಿಕೆ ನಿರ್ವಹಣೆ ಶ್ರೀ ಮಧುರಾಜ್ ಮತ್ತು ಶ್ರೀ ಲೋಕೇಶ್ ಅವರು ನೇಮಕಗೊಂಡಿದ್ದಾರೆ.
ಸಿದ್ಧಬೈಲು ಮೈದಾನದಲ್ಲಿ ನಡೆಯುವ 20ನೇ ವರ್ಷದ ಗಣೇಶೋತ್ಸವದಲ್ಲಿ ಭಜನೋತ್ಸವ, ಗಣಹೋಮ, ಉದ್ಘಾಟನಾ ಸಮಾರಂಭ, ಸಾರ್ವಜನಿಕರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು (ಮಹಿಳೆಯರು ಮತ್ತು ಪುರುಷರ ಪ್ರತ್ಯೇಕ ವಿಭಾಗ), ಧಾರ್ಮಿಕ ಸಮಾರಂಭ, ಬಹುಮಾನ ವಿತರಣಾ ಕಾರ್ಯಕ್ರಮವು ಜರುಗಲಿದೆ.


