ಸುಳ್ಯ, ಮಾ. 23 : ಕಲ್ಮಕಾರಿನ ಗುರುಪ್ರಸಾದ್ ನಿಡುಬೆ ಎಂಬವರ ಮೊಬೈಲ್ ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಅವರ ಕಾಲಿಗೆ ಗಾಯವಾದ ಘಟನೆ ಇಂದು ಬೆಳಗ್ಗೆ ವರಿದಿಯಾಗಿದೆ.
ಗುರುಪ್ರಸಾದ್ ಅವರು ಒಂದು ವರ್ಷ ಹಿಂದೆ ಖರೀದಿಸಿದ್ದ ಮೊಬೈಲ್ ಅನ್ನು ತನ್ನ ಪ್ಯಾಂಟ್ ನ ಕೀಸೆಯೊಳಗೆ ಹಾಕಿಕೊಂಡಿದ್ದರು. ಈ ವೇಳೆ ಮೊಬೈಲ್ ಸ್ಫೋಟಗೊಂಡಿದೆ. ಪ್ಯಾಂಟ್ ಕೀಸೆಯೊಳಗಿದ್ದ ಕಾರಣ ತೊಡೆಯ ಚರ್ಮ ಬೆಂದು ಹೋಗಿದೆ. ಸದ್ಯ ಯುವಕ ಚೇತರಿಸಿಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

