ಬೆಳ್ತಂಗಡಿ, ಏ. 23 : ಶ್ರೀ ಮಹಾಲಿಂಗೇಶ್ವರ ಮತ್ತು ಸಿರಿಗಳ ದೇವಸ್ಥಾನ ಹುರುಂಬಿದೊಟ್ಟು ಶಿರ್ಲಾಲು ಇಲ್ಲಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ತಂತ್ರಿಗಳಾದ ವೇ। ಮೂ। ಶ್ರೀಪಾದ ಪಾಂಗಣ್ಣಾಯರ ಪೌರೋಹಿತ್ಯದಲ್ಲಿ ದೇವಾಲಯ ನಿರ್ಮಾಣದ ಶಿಲಾನ್ಯಾಸ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ನೆರವೇರಿತು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ನೂತನ ದೇವಾಲಯ ನಿರ್ಮಾಣಕ್ಕೆ ಶಿಲಾನ್ಯಾಸಗೈದು, ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಾಯರಡ್ಕ ಗುತ್ತು ಅನುವಂಶೀಯ ಆಡಳಿತ ಮೋಕ್ತೇಸರರಾದ ಶ್ರೀ ಹರ್ಷ ಆರ್. ಜೈನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಶ್ರೀ ಪ್ರಕಾಶ್ ಕುಮಾರ್ ಜೈನ್ ಶ್ರೀ ಮಂದಾರ-ಹಿತ್ತಿಲು ಶಿರ್ಲಾಲು, ಅರ್ಚಕರಾದ ಶ್ರೀ ಸೂರ್ಯನಾರಾಯಣ ರಾವ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಶ್ ಎನ್. ನೂಜಿಗೆ ಮನೆ, ಶ್ರೀ ನಿತ್ಯಾನಂದ ನೊಚ್ಚ ಅಳದಂಗಡಿ, ಶ್ರೀ ಗಂಗಾಧರ ಮಿತ್ತಮಾರು, ಶ್ರೀ ಡಾ. ಎಂ.ಎನ್ ತುಳುಪುಳೆ, ಶ್ರೀ ಪ್ರಶಾಂತ್ ಪಾರೆಂಕಿ, ಶ್ರೀ ಸಂಜೀವ ಕೊಡಂಗೆ, ಶ್ರೀ ಚಿದಾನಂದ ಎಲ್ದಕ, ಶ್ರೀ ಕಿಶೋರ್ ಎರ್ಮೆತ್ತೋಡಿ, ಶ್ರೀ ಲಿಂಗಪ್ಪ ಬಂಗೇರ, ಎಸ್ ಕೆ ಡಿಆರ್ ಡಿಪಿ ಮೇಲ್ವಿಚಾರಕರು ಹಾಗೂ ಆಡಳಿತ ಸಮಿತಿ ಸದಸ್ಯರು, ಮಹಾಲಿಂಗೇಶ್ವರ ಭಜನಾ ಮಂಡಳಿ, ಮಹಾಲಿಂಗೇಶ್ವರ ಮಹಿಳಾ ಮಂಡಳಿ ಸದಸ್ಯರು ಮತ್ತು ಊರ ಹತ್ತು ಸಮಸ್ತ ಭಕ್ತ-ಬಾಂಧವರು ಉಪಸ್ಥಿತರಿದ್ದರು.


