ಶಿವಮೊಗ್ಗ : ಭಾರೀ ಮಳೆ ತೀರ್ಥಹಳ್ಳಿ ಬಳಿ ಗುಡ್ಡ ಕುಸಿತ : 3 ವರ್ಷದ ಮಗು, ಅಪ್ಪ ಅಮ್ಮ ಸಾವು!

ಶಿವಮೊಗ್ಗ, ಆ. 02 : ತೀರ್ಥಹಳ್ಳಿಯಲ್ಲಿ ಗುಡ್ಡ ಕುಸಿದು ಶೆಡ್ ನಲ್ಲಿದ್ದ ಒಂದೇ ಕುಟುಂಬದ ಮೂವರು ಸಾವಿಗೀಡಾದ ಘಟನೆ ಭಾನುವಾರ ಬೆಳಗಿನಜಾವ ನಡೆದಿದೆ.

Advertisement

ಮೃತಪಟ್ಟವರು ಕೊಪ್ಪಳ ಜಿಲ್ಲೆಯ ಮಲ್ಲಿಕಾರ್ಜುನ, ಪತ್ನಿ ನಾಗವೇಣಿ ಹಾಗೂ ಮೂರು ವರ್ಷದ ಮಗು ಸಂತೋಷ್. ಬೆಳಗಿನ ಜಾವ ನಡೆದ ಘಟನೆ. ತೀರ್ಥಹಳ್ಳಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ನದಿಗಳು ಅಪಾಯಕಾರಿ ಸ್ಥಿತಿಯಲ್ಲಿ ಹರಿಯುತ್ತಿವೆ.

ನಿಧಾನಕ್ಕೆ ಸುರಿಯುತ್ತಿದ್ದ ಮುಂಗಾರು ಮಳೆ 4 ದಿನಗಳಿಂದೀಚೆ ತಾಲೂಕಿನಲ್ಲಿರಭಸವಾಗಿದ್ದು ತುಂಗಾ, ಕುಶಾವತಿ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ತುಂಗಾ, ಮಾಲತಿ ನದಿ ಅಬ್ಬರಿಸಿ ಕೆಂಪೇರಿ ಹರಿಯುತ್ತಿದ್ದು, ಮುಂಗಾರು ಮಳೆ ಆರಂಭವಾಗಿ 2 ತಿಂಗಳ ನಂತರ ಮೊದಲ ಬಾರಿಗೆ ಪ್ರವಾಹ ಮಟ್ಟದಲ್ಲಿದೆ.

ಮಾಲತಿ ನದಿಯಲ್ಲಿ ಪ್ರವಾಹ ಹೆಚ್ಚಾಗಿ ಭತ್ತದ ಗದ್ದೆ, ಅಡಕೆ ತೋಟ ಮುಳುಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಅನೇಕ ಗ್ರಾಮದಲ್ಲಿ ತುಂಗಾನದಿ ತೀರದ ಸಾಗುವಳಿ ಪ್ರದೇಶ ಪ್ರವಾಹದ ಸುಳಿಗೆ ಸಿಕ್ಕಿದೆ. ತೀರ್ಥಹಳ್ಳಿ ಪಟ್ಟಣದ ಶ್ರೀರಾಮೇಶ್ವರ ದೇವಸ್ಥಾನ ಸಮೀಪದ ತುಂಗಾನದಿಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀರಾಮಮಂಟಪ ಮುಳುಗುವ ಹಂತ ಮುಟ್ಟಿದೆ. ನದಿ ತೀರದಲ್ಲಿಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜ ಸಾಂತ್ವನ – ರೂ.20 ಲಕ್ಷ ಪರಿಹಾರಕ್ಕೆ ಕ್ರಮ

ತಾಲೂಕು, ಬೆಳ್ತಂಗಡಿ

ಮುಂಡಾಜೆ : ನಿವೃತ್ತ ಶಿಕ್ಷಕ ಶಂಕರ್ ತಾಮನ್ಕರ್ ರಿಂದ ಮಾದರಿ ಸೇವೆ – ತಂದೆ ದಿ. ನಾರಾಯಣ ತಾಮನ್ಕರ್ ಸವಿನೆನಪಿಗಾಗಿ ಅರ್ಹರಿಗೆ ಧನ ಸಹಾಯ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಭಾರೀ ಮಳೆ ಹಿನ್ನೆಲೆ : ನಾಳೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ತುರ್ತು ಸಭೆ

⚠️ Contents are protected on this website.