ಬೆಳ್ತಂಗಡಿ : ಫೋಕ್ಸೋ ಪ್ರಕರಣದ ಆರೋಪಿ ಅಮ್ಮದ್ ಖಾನ್ ಗೆ ಜಾಮೀನು ಮಂಜೂರು!


ಬೆಳ್ತಂಗಡಿ : ಫೋಕ್ಸೋ ಪ್ರಕರಣದ ಆರೋಪಿ ಅಮ್ಮದ್ ಖಾನ್ ಗೆ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಅದೇಶಿಸಿದೆ.

ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಆರೋಪಿ ಅಮ್ಮದ್ ಖಾನ್ (18) ಎಂಬವರ ವಿರುದ್ಧ ನ.25ರಂದು ಫೋಕ್ಸೋ ಕಾಯ್ದೆ ಕಲಂ 4ಮತ್ತು 6ಅಡಿಯಲ್ಲಿ ಪ್ರಕರಣ ದಾಖಲಿಸಿ ನ.27ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಪ್ರಕರಣದಲ್ಲಿ ಡಿ.15ರಂದು ಆರೋಪಿಯ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಹಾಕಿದ್ದ. ಇದೀಗ ಆರೋಪಿಯ ಜಾಮೀನು ಅರ್ಜಿಯನ್ನು ಪರಿಶೀಲಿಸಿ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಆರೋಪಿಗೆ ಡಿ.24ರಂದು ಜಾಮೀನು ಮಂಜೂರು ಮಾಡಿರುತ್ತದೆ.

ಆರೋಪಿ ಪರವಾಗಿ ವಕೀಲರಾದ ಉಮರುಲ್ ಫಾರೂಕ್ ನೆಲ್ಯಾಡಿ, ಸಿರಾಜುದ್ದೀನ್ ಎ ಜೋಗಿಬೆಟ್ಟು ವಾದಿಸಿದರು.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಕರಾವಳಿ, ಟಾಪ್ ಸುದ್ದಿಗಳು

ಮಣಿಪಾಲ : ಚಾಲಕನ ನಿಯಂತ್ರಣ ತಪ್ಪಿ ಬಸ್ ನಿಲ್ದಾಣಕ್ಕೆ ಢಿಕ್ಕಿ ಹೊಡೆದ ಕಾರು – ಓರ್ವ ಸಾವು !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳವು

ಟಾಪ್ ಸುದ್ದಿಗಳು, ರಾಜ್ಯ / ದೇಶ

“ಆಪರೇಶನ್ ಸಿಂಧೂರ್” ಭಯಾನಕ ದಾಳಿ ಬಳಿಕ – ಇಲಿಗಳಂತೆ ಬಿಲ ಸೇರಿದ್ದಾವೆ ಪಾಕಿಸ್ತಾನದ ಹಫೀಜ್ ಸಯೀದ್ – ಮಸೂದ್ ಅಜರ್ !

⚠️ Contents are protected on this website.