ಕಲ್ಮಂಜ, ಏ. 24 : ಗ್ರಾಮದ ನಿಡಿಗಲ್ ಸಮೀಪದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಳ್ಳತನ ನಡೆದ ಘಟನೆ ಏ.24 ರಂದು ಮುಂಜಾನೆ ನಡೆದಿದೆ. ಬೆಳಗಿನ ಜಾವ 4 ಗಂಟೆಗೆ ಅರ್ಚಕರು ದೇವಸ್ಥಾನದ ಬಾಗಿಲು ತೆಗೆಯುವ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಕಳ್ಳರು ಒಳಗೆ ಇರುವುದು ತಿಳಿದು ಅರ್ಚಕರು ಸ್ಥಳೀಯ ನಿವಾಸಿಯನ್ನು ಕರೆದುಕೊಂಡು ಬರುವ ವೇಳೆಯಲ್ಲಿ ದೇವಸ್ಥಾನದ ಒಳಗಿನ ಹಂಚು ತೆಗೆದು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದೇ ಪರಿಸರದ ಎರಡು ದಿನಗಳ ಹಿಂದೆ ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದದಲ್ಲಿ ಕಳ್ಳತನ ನಡೆದಿತ್ತು.
ಕಳ್ಳರು ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿಕೊಂಡು ತಮ್ಮ ಕೈಚಳಕ ಮೆರೆಯುತ್ತಿದ್ದಾರೆ. ಎರಡೂ ದೇವಸ್ಥಾನದಲ್ಲಿ ಒಂದೇ ಗ್ಯಾಂಗ್ ಕಳ್ಳತನ ನಡೆಸಿದೆಯೇ ? ಎಂಬ ಶಂಕೆ ಸಾರ್ವಜನಿಕರದ್ದು.

