ಬೆಳ್ತಂಗಡಿ : ತೋಟಕ್ಕೆ ಬಂದಿದ್ದ ಅಪರೂಪದ ಚಿಪ್ಪು ಹಂದಿ ರಕ್ಷಣೆ

ಬೆಳ್ತಂಗಡಿ : ತೋಟಕ್ಕೆ ಬಂದಿದ್ದ ಅಪರೂಪದ ಚಿಪ್ಪುಹಂದಿ( Indian pangolik) ಯನ್ನು ವೇಣೂರು ಅರಣ್ಯ ಇಲಾಖೆ ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

Advertisement



ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ತಾರಿದೊಟ್ಟು ನಿವಾಸಿ ಹರೀಶ್ ರೈ ಮನೆಯ ತೋಟಕ್ಕೆ ನ. 7 ರಂದು ಬಂದಿದ್ದ ಅಪರೂಪದ ಚಿಪ್ಪುಹಂದಿ (Indian pangolin) ತಿರುಗಾಡುತ್ತಿರುವ ಬಗ್ಗೆ ಸಾರ್ವಜನಿಕರು ವೇಣೂರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು. ಅದರಂತೆ ವೇಣೂರು ವಲಯ ಅರಣ್ಯಾಧಿಕಾರಿ ಭರತ್.ಯು.ಜಿ ಸೂಚನೆಯಂತೆ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹಿಡಿದು ಬೋಣಿಗೆ ಹಾಕಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ವೇಣೂರು ವಲಯ ಅರಣ್ಯಾಧಿಕಾರಿ ಭರತ್.ಯು.ಜಿ ನೇತೃತ್ವದಲ್ಲಿ ಅಳದಂಗಡಿ ಶಾಖೆಯ ಉಪ ಅರಣ್ಯಾಧಿಕಾರಿ ಹರಿಪ್ರಸಾದ್ , ಬೀಟ್ ಫಾರಸ್ಟರ್ ಮಂಜುನಾಥ್.ಬಿ.ಎನ್, ಸಿಬ್ಬಂದಿ ವೆಂಕಪ್ಪ ,ಪೂವಪ್ಪ,ವಸಂತ ಹಾಗೂ ಸ್ಥಳೀಯರಾದ ಯಶೋಧರ ಶೆಟ್ಟಿ,ಪ್ರವೀಣ, ವೃಷಭ ಹೆಗ್ಡೆ, ನವೀನ,ಪದ್ಮನಾಭ ಕುಲಾಲ್, ನಂದಾ ರೈ, ಸಂಜೀವ ರೈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

⚠️ Contents are protected on this website.