ನವದೆಹಲಿ : ಎಐ ಆಧಾರಿತ ತೀರ್ಪು ನೀಡುವ ಆದೇಶ್ ರದ್ದು ಮಾಡಿದ ಸುಪ್ರೀಂ

ನವದೆಹಲಿ, ಜು. 02 : ದೇಶದ ನ್ಯಾಯಾಲಯಗಳಲ್ಲಿ ತೀರ್ಪುಗಳನ್ನು ನೀಡಲು ಕೃತಕ ಬುದ್ಧಿಮತ್ತೆ (ಎಐ) ಬಳಸುವಂತೆ ರಾಷ್ಟ್ರೀಯ ಕಂಪನಿ ಕಾನೂನುಗಳ ನ್ಯಾಯಧೀಕರಣ (ಎನ್‌ಸಿಎಲ್‌ಟಿ) ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

Advertisement

ಎಸ್ಸೆಲ್ ಇನ್‌ಫ್ರಾಪ್ರಾಜೆಕ್ಟ್ ದಿವಾಳಿತನ ಪ್ರಕರಣದಲ್ಲಿ ಎನ್‌ಸಿಎಲ್‌ಟಿ, ಎಐ ಉಪಕರಣಗಳನ್ನು ಬಳಸಿ ತೀರ್ಪು ನೀಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆ ತೀರ್ಪನ್ನು ರದ್ದುಗೊಳಿಸಿದೆ.

‘ದೇಶದ ನ್ಯಾಯಾಲಯಗಳಲ್ಲಿ ಎಐ ಆಧಾರಿತ ತೀರ್ಪು ನೀಡುವುದು ಸಲ್ಲದು’ ಎಂದಿರುವ ಸುಪ್ರೀಂ ಕೋರ್ಟ್, ‘ನ್ಯಾಯಾಲಯಗಳ ತೀರ್ಪುಗಳಿಗೆ ಎಐ ಬಳಸಿದರೆ ಎಂದೂ ಕೇಳಿರದಂಥ, ನಕಲಿಯಾದ, ಭ್ರಮಾಪ್ರೇರಿತವಾದ ತೀರ್ಪುಗಳು ಹೊರಬೀಳುವ ಸಾಧ್ಯತೆಗಳೇ ಹೆಚ್ಚು. ಇದೊಂದು ರೀತಿ ಮಿಥೈಲ್ ಐಸೋ ಸೈನೇಡ್ ಎಂಬ ಅಪಾಯಕಾರಿ ರಾಸಾಯನಿಕದಂತೆ. ಇದರ ದುಷ್ಪರಿಣಾಮ ತಿಳಿಯುವಷ್ಟರಲ್ಲಿ ಇಡೀ ವ್ಯವಸ್ಥೆಯೇ ನಾಶವಾಗಿರುತ್ತದೆ’ ಎಂದು ಎಚ್ಚರಿಸಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.