ಅಳದಂಗಡಿ, ಆ. 10 : ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಸುವರ್ಣ ಸಂಭ್ರಮದ ಸಮಾಲೋಚನಾ ಸಭೆಯು ಇಂದು ನಡೆಯಿತು.

ಸಭೆಯಲ್ಲಿ, ಸುವರ್ಣ ಸಂಭ್ರಮವೆಂಬುದು ಕೇವಲ ಒಂದು ಕಾರ್ಯಕ್ರಮವಲ್ಲ; ಇದು ನಮ್ಮ ಸಂಘದ 50 ವರ್ಷಗಳ ಸಹಕಾರ, ಸೇವೆ, ನಂಬಿಕೆ ಮತ್ತು ಸಾಧನೆಯ ಸ್ಮರಣೀಯ ಪಯಣ. ಈ ಐತಿಹಾಸಿಕ ಸಂಭ್ರಮವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರದ್ದು. ಹೀಗಾಗಿ ಸುವರ್ಣ ಸಂಭ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸುವುದಕ್ಕೆ ಪದಾಧಿಕಾರಿಗಳು ಸಲಹೆ-ಸೂಚನೆಗಳನ್ನು ನೀಡಿದರು.

ನಾವು ಒಗ್ಗಟ್ಟಾಗಿ ಹೆಜ್ಜೆ ಇಟ್ಟರೆ, ನಮ್ಮ ಸುವರ್ಣ ಸಂಭ್ರಮವು ಇತಿಹಾಸದಲ್ಲಿ ನೆನಪಾಗಿ ಉಳಿಯುವಂತಹ ಒಂದು ಅದ್ಭುತ ಕಾರ್ಯಕ್ರಮವಾಗಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಕೇಶ್ ಹೆಗಡೆ ತಿಳಿಸಿದರು.




