ಬಂದಾರು, ಆ. 22 : ಅಭಿನಂದನಾ ಸಮಿತಿ, ಬಂದಾರು, ಮೊಗ್ರು, ಕಣಿಯೂರು ಗ್ರಾಮದ ಸಮಸ್ತರ ಪರವಾಗಿ ಪ್ರತಿಷ್ಠಿತ ಕರ್ನಾಟಕ ಟಿವಿ ನೀಡುವ ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದಲ್ಲಿ “ಉತ್ತಮ ಶಾಸಕ ಪ್ರಶಸ್ತಿ” ಪುರಸ್ಕೃತರಾದ ಬೆಳ್ತಂಗಡಿ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜಾರವರಿಗೆ ಗೌರಾವಾಭಿನಂದನೆ ಸನ್ಮಾನ ಕಾರ್ಯಕ್ರಮ ಆಗಸ್ಟ್ 23 ಆದಿತ್ಯವಾರದಂದು ಪದ್ಮುಂಜ ಸಿ. ಎ ಬ್ಯಾಂಕ್ ರೈತ ಸಭಾಭವನದಲ್ಲಿ ನಡೆಯಲಿದೆ.
ನಾಳೆ ಬೆಳಗ್ಗೆ 11.00 ಗಂಟೆಗೆ ಪದ್ಮುಂಜ ಸಿ. ಎ ಬ್ಯಾಂಕ್ ರೈತ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಭಿನಂದನಾ ಸಮಿತಿ ವತಿಯಿಂದ ಸಮಸ್ತರಿಗೂ ಆತ್ಮೀಯ ಆಮಂತ್ರಣ.




