ಬಂಟ್ವಾಳ, ಜು. 16 : ಬಂಟ್ವಾಳ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳ ಬರ್ಬರ ಹತ್ಯೆ ಇಡಿ ಜಿಲ್ಲೆಯಲ್ಲಿ ಆತಂಕ ಸೃಷ್ಟಿ ಮಾಡಿದೆ. ಇದೀಗ ಆರೋಪಿಯ ಕುರಿತಾದ ಮಾಹಿತಿ ಬಹಿರಂಗವಾಗುತ್ತಿದೆ.
ಯುವತಿ ಲಾವಣ್ಯಳನ್ನು ಹಾಡಹಗಲೇ ಬಸ್ ನಿಲ್ದಾಣದಲ್ಲಿ ರಾಕ್ಷಸರಂತೆ ಕೊಚ್ಚಿ ಕೊಲೆಗೈದಿದ್ದು ಆಕೆಯ ದೂರದ ಸಂಬಂಧಿ ಎಂದು ವರದಿಯಾಗಿದೆ. ಎಕಪಕ್ಷೀಯವಾಗಿ ಪ್ರೀತಿಸುತ್ತಿದ್ದ ಚೇತನ್ ಈ ಕೃತ್ಯ ಎಸಗಿದ್ದಾನೆ.
ಆರೋಪಿಯ ಬಂಧನಕ್ಕೆ ವ್ಯಾಪಕ ಬಲೆ ಬೀಸಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.
ಚೇತನ್ ಕೃತ್ಯಕ್ಕೆ ಇಡೀ ಸಮಾಜವೇ ಶಪಿಸುತ್ತಿದೆ. ಮಾನವೀಯತೆಯೇ ಇಲ್ಲದ ರಾಕ್ಷಸಿ ಪ್ರವೃತ್ತಿಯಿಂದ ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ.


