ಬೆಳ್ತಂಗಡಿ : ಅಯ್ಯಪ್ಪ ಸ್ವಾಮಿ ಭಕ್ತವೃಂದ ಬೀಟಿಗೆ, ಚಾರ್ಮಾಡಿ ಇದರ ಆಶ್ರಯದಲ್ಲಿ 43ನೇ ವರ್ಷದ ಮಂಡಲ ಪೂಜೆ, ಭಜನಾ ಕಾರ್ಯಕ್ರಮ

ಚಾರ್ಮಾಡಿ, ಡಿ. 27 : ಅಯ್ಯಪ್ಪ ಸ್ವಾಮಿ ಭಕ್ತವೃಂದ ಬೀಟಿಗೆ, ಚಾರ್ಮಾಡಿ ಇದರ ಆಶ್ರಯದಲ್ಲಿ 43ನೇ ವರ್ಷದ ಮಂಡಲ ಪೂಜೆ ಹಾಗೂ ಭಜನಾ ಕಾರ್ಯಕ್ರಮ ಡಿ. 26 ಶುಕ್ರವಾರ ಭಕ್ತಿ-ಭಾವದಿಂದ ಜರುಗಿತು.

Advertisement

43ನೇ ವರ್ಷದ ಮಂಡಲ ಪೂಜೆ ಹಾಗೂ ಭಜನಾ ಕಾರ್ಯಕ್ರಮದಲ್ಲಿ ಶ್ರೀ ಮತ್ತೂರು ಪಂಚಲಿಂಗೇಶ್ವರ ಭಜನಾ ತಂಡ-ಚಾರ್ಮಾಡಿ, ಶ್ರೀ ಶಿವ ಪಾರ್ವತಿ ಭಜನಾ ತಂಡ-ಪರ್ಲಾಣಿ ಹಾಗೂ ಶ್ರೀ ಉಳ್ಳಾಯ ಉಳ್ಳಾಲ್ತಿ ಭಜನಾ ತಂಡ-ಬೀಟಿಗೆ ಚಾರ್ಮಾಡಿ ತಂಡಗಳಿಂದ ಕುಣಿತ ಭಜನಾ ಸೇವೆ ಜರುಗಿತು.

ಶ್ರೀ ಕುಶಾಲಪ್ಪ ಗೌಡ ಗುರುಸ್ವಾಮಿ ಇವರ ನೇತೃತ್ವದಲ್ಲಿ ಅಪ್ಪ ಸೇವೆ, ಮಂಡಲ ಮಹಾ ಪೂಜೆ ಜರುಗಿತು. ಆ ಬಳಿಕ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ಕಾರ್ಯಕ್ರಮದಲ್ಲಿ ಅಯ್ಯಪ್ಪ ಭಕ್ತವೃಂದ ಬೀಟಿಗೆ ಚಾರ್ಮಾಡಿ ಇದರ ಅಧ್ಯಕ್ಷರು, ಸರ್ವಸದಸ್ಯರು, ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹಾಗೂ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಕರಾವಳಿ, ಟಾಪ್ ಸುದ್ದಿಗಳು

ಮಣಿಪಾಲ : ಚಾಲಕನ ನಿಯಂತ್ರಣ ತಪ್ಪಿ ಬಸ್ ನಿಲ್ದಾಣಕ್ಕೆ ಢಿಕ್ಕಿ ಹೊಡೆದ ಕಾರು – ಓರ್ವ ಸಾವು !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳವು

ಟಾಪ್ ಸುದ್ದಿಗಳು, ರಾಜ್ಯ / ದೇಶ

“ಆಪರೇಶನ್ ಸಿಂಧೂರ್” ಭಯಾನಕ ದಾಳಿ ಬಳಿಕ – ಇಲಿಗಳಂತೆ ಬಿಲ ಸೇರಿದ್ದಾವೆ ಪಾಕಿಸ್ತಾನದ ಹಫೀಜ್ ಸಯೀದ್ – ಮಸೂದ್ ಅಜರ್ !

⚠️ Contents are protected on this website.