ಬೆಳ್ತಂಗಡಿ, ಸೆ. 04 : ಬೆಳಾಲು ಗ್ರಾಮದ ಮಿನoದೇಲು, ಡಿ ಪಿ ಸ್ಪೋರ್ಟ್ಸ್ ಕ್ಲಬ್ ಮೈದಾನದ ಪಕ್ಕದ ಬಸ್ ನಿಲ್ದಾಣ ದ ಬಳಿ ಸೆ 03 ರಂದು ರಾತ್ರಿ 10 ರಿಂದ 10.30 ಸಮಯದಲ್ಲಿ ಬೈಕ್ ನಲ್ಲಿ ಸವಾರರಿಗೆ ಆನೆ ಎದುರಾಗಿದೆ.
ಬೈಕ್ ಸವಾರರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಅದೇ ಆನೆಮಂಜನೊಟ್ಟು ನಿಂದ ಭಂಡಾರಿ ಮಜಲು ಆಗಿ 1:35 ಗಂಟೆಗೆ ಮುಂಡೆತ್ಯಾರು ದಾಟಿ ಕೆಳಗಿನ ಬೆಳಾಲು ಕಡೆಗೆ ತೆರಳಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆನೆ ತೆರಳಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿದೆ.




